2024-09-19 09:03:02

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಕನ್ನಡ ಬಾರದ ಶಿಕ್ಷಣ ಸಚಿವರಿಂದ ಶಿಕ್ಷಣ  ಇಲಾಖೆ ದುರ್ಬಲವಾಗುವುದಿಲ್ಲವೆ : ಬಸವನಗೌಡ ಯತ್ನಾಳ್

ನನಗೆ ಕನ್ನಡ ಓದಲು ಸ್ಪಲ್ಪ ಕಷ್ಟ ಎಂದು ಹೇಳಿಕೆ ನೀಡಿದ ಸಚಿವ ಮಧು ಬಂಗಾರಪ್ಪ ಅವರನ್ನು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಅವರು ಲೇವಾಡಿ ಮಾಡಿ, ಇದರಿಂದ ಶಿಕ್ಷಣ ಇಲಾಖೆ ದುರ್ಬಲ ಆಗುವುದಿಲ್ಲವೇ ಎಂದಿದ್ದಾರೆ.

ಶಿವಮೊಗ್ಗದಲ್ಲಿ ಇತ್ತೀಚೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬಗ್ಗೆ ಪ್ರತಿಕ್ರಿಯಿಸಿದ ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರು ನನಗೆ ಕನ್ನಡ ಅಷ್ಟೊಂದು ಶುದ್ಧವಾಗಿ ಓದಲು ಬರುವುದಿಲ್ಲ ಕನ್ನಡ ಉಚ್ಚಾರಣೆಯಲ್ಲಿ ತಪ್ಪಾಗುತ್ತದೆ. ಅದನ್ನು ಕೆಲವರು ಕೆಟ್ಟದಾಗಿ ಟ್ರೋಲ್ ಮಾಡುತ್ತಾರೆ, ಅಂತವರು ಯಾವುದೇ ಕಾರಣಕ್ಕೂ ಉದ್ಧಾರವಾಗಲ್ಲ ಎಂದು  ಶಾಪ ಹಾಕಿದರು. ಇವರ ಈ ಹೇಳಿಕೆ ಎಲ್ಲೆಡೆ  ಭಾರೀ ವೈರಲ್ ಆಗಿತ್ತು. ಈ ಸಂಬಂಧ ಎಕ್ಸ್‌ನಲ್ಲಿ ಬರೆದುಕೊಂಡಿರುವ ಬಸನಗೌಡ ಪಾಟೀಲ್ ಅವರು ಕನ್ನಡ ಓದಲು ಬರದ ಸಚಿವರು ಶಿಕ್ಷಣ ನೀತಿಯನ್ನು ನಿರೂಪಿಸಬಲ್ಲರು, ಇವರಿಂದ ಶಿಕ್ಷಕ ಇಲಾಖೆ ದುರ್ಬಲವಾಗುವುದಿಲ್ಲವೆ ಎಂದಿದ್ದಾರೆ. ಸದನದಲ್ಲಿ ಸಂಧಿ, ಸಮಾಸ ಬಿಡಿಸುವ ಸಿದ್ದರಾಮಯ್ಯ ನವರೇ, ನಿಮ್ಮ ಸಂಪುಟದಲ್ಲಿರುವ ಶಿಕ್ಷಣ ಸಚಿವರೇ ನನಗೆ ಕನ್ನಡ ಬರೋದಿಲ್ಲವೆಂದು ಎಂದು  ವ್ಯಂಗ್ಯವಾಡಿದ್ದಾರೆ.

Post a comment

No Reviews