2024-09-19 04:30:57

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ದರ್ಶನ್‌ ನಿಂದಿಸಿದವರಿಗೆ ಮಗ ವಿನೀಶ್ ಥ್ಯಾಂಕ್ಸ್‌ ಹೇಳಿದ್ಯಾಕೆ..?

ಬೆಂಗಳೂರು: ಕೊಲೆ ಆರೋಪಿ ನಟ ದರ್ಶನ್‌ ಮಗ ವಿನೀಶ್ ತಂದೆಯ ಬಂಧನದ ಬಗ್ಗೆ ಭಾವುಕ ಪೋಸ್ಟ್ ಹಂಚಿಕೊಂಡಿದ್ದು ಯಾರೆಲ್ಲಾ ತಮ್ಮ ತಂದೆಯನ್ನು ಮನಸ್ಸೋ ಇಚ್ಛೆ ನಿಂದಿಸುತ್ತಿದ್ದೀರೋ ಥ್ಯಾಂಕ್ಸ್‌ ಹೇಳಲು ಭಯಸುವುದಾಗಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

ವಿನೀಶ್‌ ತಂದೆ ದರ್ಶನ್ ಸಧ್ಯೆ ಜೈಲಿನಲ್ಲಿದ್ದಾರೆ ಅವರ ಕುಟುಂಬ ದುಃಖದಲ್ಲಿ ದಿನಕಳೆಯುತ್ತಿದೆ. ಪತ್ನಿ ವಿಜಯಲಕ್ಷ್ಮಿ ತಮ್ಮ ಇನ್ ಸ್ಟಾ ಪೇಜ್‌ ನಲ್ಲಿ ದರ್ಶನ್‌ ಗೆ ಸಂಬಂಧಿಸಿದ ಎಲ್ಲರನ್ನೂ ಅನ್‌ಫಾಲೋ ಮಾಡಿದ್ದಲ್ಲದೇ, ದರ್ಶನ್‌ ಜೊತೆಗಿನ ತಮ್ಮ ಎಲ್ಲಾ ಫೋಟೊಗಳನ್ನು ಡಿಲೀಟ್ ಮಾಡಿದ್ದಾರೆ. 
ಇದರ ಬೆನ್ನಲ್ಲೇ ಮಗ ವಿನೀಶ್‌ "ನನ್ನ ತಂದೆ ಬಗ್ಗೆ ಕೆಟ್ಟ ಕಾಮೆಂಟ್ಸ್ ಹಾಗೂ ಅಸಭ್ಯ ಭಾಷೆಯಲ್ಲಿ ನಿಂದಿಸುತ್ತಿರುವವರಿಗೆ ಧನ್ಯವಾದ. ನನಗೀಗ 15 ವರ್ಷ, ನನಗೂ ಮನಸ್ಸಿದೆ. ಈ ಕಷ್ಟದ ಸಮಯದಲ್ಲಿ ನನ್ನ ತಾಯಿ ಮತ್ತು ತಂದೆಗೆ ನಿಮ್ಮ ಬೆಂಬಲ ಬೇಕಾಗಿದೆ. ನನಗೆ ಶಾಪ ಹಾಕುವುದರಿಂದ ಯಾವ ಪ್ರಯೋಜನವಿಲ್ಲ" ಎಂದು ಇನ್‌ಸ್ಟಾ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

ಈ ಪೋಸ್ಟ್‌ ನೋಡಿದ ಕೆಲವರು ಹೌದು ಅಪ್ಪ ಮಾಡಿದ ತಪ್ಪಿಗೆ ಮಗನಿಗೆ ಅಥವಾ ಪತ್ನಿ ನೋವು ಕೊಡುವುದು ಸರಿಯಲ್ಲಾ ಎಂದು ತಮ್ಮ ಅಭಿಪ್ರಾಯಗಳನ್ನ ಹಂಚಿಕೊಳ್ಳುತ್ತಿದ್ದಾರೆ.

Post a comment

No Reviews