
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಜೈಲು ಸೇರಿರುವ ನಟ ದರ್ಶನ್ ಅವರನ್ನು ಇಂದು (ಜೂನ್ 24) ವಿನೋದ್ ಪ್ರಭಾಕರ್ ಪರಪ್ಪನ ಅಗ್ರಹಾರ ಜೈಲಿಗೆ ಬಂದು ಭೇಟಿ ಮಾಡಿದರು.
ಕೊಲೆ ಪ್ರಕರಣದ A2 ಅರೋಪಿಯಾಗಿರುವ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಪರಿಸ್ಥಿತಿ ಚೆನ್ನಾಗಿ ಇದ್ದಾಗ ದರ್ಶನ್ ಅವರಿಂದ ಕನ್ನಡ ಚಿತ್ರರಂಗದ ಅನೇಕರು ಸಹಾಯ ಪಡೆದಿದ್ದರು. ಆದರೆ ಈಗ ಅವರನ್ನು ನೋಡಲು ಯಾವ ಸ್ನೇಹಿತರೂ ಬರುತ್ತಿಲ್ಲ ಎಂದು ಜನರು ಸೋಶಿಯಲ್ ಮೀಡಿಯಾದಲ್ಲಿ ಟೀಕೆ ಮಾಡಿದ್ದರು. ಇದೀಗ ಇಂದು ಪತ್ನಿ ವಿಜಯಲಕ್ಷ್ಮೀ ಮಗ ವಿನೀಶ್ ನಟ ವಿನೋದ್ ಪ್ರಭಾಕರ್ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ಪೊಲೀಸರ ಅನುಮತಿ ಮೇರಿಗೆ ದರ್ಶನ್ ಅನ್ನು ಭೇಟಿ ಮಾಡಿ ದೈರ್ಯ ಹೇಳುವ ಕೆಲಸ ಮಾಡಿದ್ದಾರೆ.
Poll (Public Option)

Post a comment
Log in to write reviews