
ರಾಯಚೂರು: ಎರಡು ದ್ವಿಚಕ್ರ ವಾಹನಗಳು ಮುಖಾಮುಖಿಯಾಗಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ಸಿಎಸ್ಎಫ್ ಕ್ಯಾಂಪ್ ಚರ್ಚ್ ಬಳಿ ಶುಕ್ರವಾರ ಸಂಭವಿಸಿದೆ.
ಜವಳಗೇರಾ ಗ್ರಾಮದ ಮುದಿಯಾ ಥಾಮಸ್ (40) ಹಾಗೂ ಧುಮತಿ ಗ್ರಾಮದ ಶೇಕ್ಷಾವಲಿ ದರ್ಗಾಸಾಬ್ (20) ಮೃತರೆಂದು ಎಂದು ಗುರುತಿಸಲಾಗಿದೆ.
ಮದಿಯಾ ಥಾಮಸ್ ಜವಳಗೇರಾದಿಂದ ಸಿಎಸ್ಎಫ್ಗೆ ಹೋಗುತ್ತಿದ್ದರೆ, ಶೇಕ್ಷಾವಲಿ ಸಿಎಸ್ಎಫ್ನಿಂದ ಜವಳಗೇರಾ ಗ್ರಾಮಕ್ಕೆ ತೆರಳುವ ವೇಳೆ ಅಪಘಾತ ದುರಂತ ಸಂಭವಿಸಿದೆ. ಬೈಕ್ಗಳ ಹಿಂಬದಿಯಲ್ಲಿ ಕುಳಿತಿದ್ದ ಜವಳಗೇರಾದ ಯಂಕಪ್ಪ, ಧುಮತಿಯ ಮುಸ್ತಫಾ ಎಂಬವರಿಗೆ ಗಂಭೀರ ಗಾಯಗಳಾಗಿದ್ದು, ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Poll (Public Option)

Post a comment
Log in to write reviews