2024-09-19 04:57:44

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ದ್ವಿಚಕ್ರ ವಾಹನ ಪಲ್ಟಿ: ಅನಾಯಾಸವಾಗಿ ಎದ್ದು ಹೊರಟ ಧೀರ

ಚಿಕ್ಕಮಗಳೂರು: ದ್ವಿಚಕ್ರ ವಾಹನ ಪಲ್ಟಿ ಹೊಡೆದು ಅಪಘಾತ ಸಂಭವಿಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಚಿಕ್ಕಮಾಗರವಳ್ಳಿಯಲ್ಲಿ ನಡೆದಿದೆ. ಈ ಘಟನೆ ಸಂಭವಿಸಿದರೂ ಸವಾರ ಪವಾಡ ಸದೃಶ ರೀತಿಯಲ್ಲಿ ಬದುಕಿ ಬಂದಿರುವ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬೆಚ್ಚಿ ಬೀಳುಸುವಂತಿದೆ.

ರಸ್ತೆಯಲ್ಲಿ 2 ದ್ವಿಚಕ್ರವಾಹನಗಳು ಬರುತ್ತಿತ್ತು. ಈ ವೇಳೆ ತಿರುವಿನಲ್ಲಿ ಓರ್ವ ಸವಾರನ ಸ್ಕೂಟಿ ರಸ್ತೆಯಿಂದ ಬದಿಗೆ ಇಳಿದ ಪರಿಣಾಮ ಸವಾರನ ಜೊತೆಗೆ ವಾಹನ ಕೂಡ 3 ಅಡಿ ಎತ್ತರಕ್ಕೆ ಹಾರಿ, ಉರುಳಿ ರಸ್ತೆ ಮೇಲೆ ಬಿದ್ದಿದೆ. ತಕ್ಷಣ ಸವಾರ ಎದ್ದು ನಿಂತಿದ್ದಾನೆ. ಅಪಘಾತದಿಂದ ವಾಹನಕ್ಕೆ ಹಾನಿಯಾಗಿರುವುದು ಬಿಟ್ಟರೆ ಆಲ್ದೂರಿನ ಸಂತೆ ಮೈದಾನದ ಯುವಕನಿಗೆ ಯಾವುದೇ ಗಾಯಗಳಾಗಿಲ್ಲ.

ಘಟನಾ ಸ್ಥಳ ಆಲ್ದೂರು ಸಮೀಪದ ಹಳ್ಳಿಯಾಗಿದ್ದು, ಅಪಘಾತದ ಶಬ್ಧಕ್ಕೆ ರಸ್ತೆ ಬದಿ ಇದ್ದ ಮನೆ ಮಂದಿಯೆಲ್ಲ ಹೊರ ಬಂದು ನೋಡಿದ್ದಾರೆ. ಸವಾರ ಮಾತ್ರ ಏನು ಆಗಿಲ್ಲವೆಂಬಂತೆ ತನ್ನ ಗಾಡಿ ತೆಗೆದುಕೊಂಡು ಮುಂದಕ್ಕೆ ಸಾಗಿದ್ದಾನೆ ಎನ್ನಲಾಗಿದೆ.

 

Post a comment

No Reviews