
ಚಾಮರಾಜನಗರ: ಕೆರೆಯಲ್ಲಿ ಮಲಗಿ ಕೂಲ್ ಆಗುತ್ತಿದ್ದ ಹುಲಿಯು ಆನೆಯನ್ನು ಕಂಡು ಕಂಗೆಟ್ಟು ಓಡಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ನಡೆದಿದೆ.ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಗಜರಾಜನ ನೋಡಿ ಹುಲಿರಾಯ ಕಾಲು ಕಿತ್ತಿದ್ದನ್ನು ಕಂಡ ಸಫಾರಿಗರು ರೋಮಾಂಚಿತರಾಗಿದ್ದಾರೆ. ಬಂಡೀಪುರದಲ್ಲಿ ಕೆರೆಯಲ್ಲಿ ಬಿಸಿಲಿನ ತಾಪಕ್ಕೆ ಹುಲಿಯೊಂದು ಕೆರೆಗೆ ಇಳಿದು ರಿಲ್ಯಾಕ್ಸ್ ಮೂಡಿಗೆ ಜಾರಿತ್ತು. ದಾಹ ತಣಿಸಿಕೊಳ್ಳಲು ಬಂದ ಗಜರಾಜ ಹುಲಿಯನ್ನು ಕಂಡ ಕೂಡಲೇ ದಾಳಿ ಮಾಡುವಂತೆ ಮುನ್ನುಗ್ಗಿ ಹುಲಿಯನ್ನು ಅಟ್ಟಾಡಿಸಿ ಓಡಿಸಿದ್ದು, ಸದ್ಯ, ವೀಡಿಯೋ ಭಾರೀ ಸದ್ದು ಮಾಡುತ್ತಿದೆ.
Poll (Public Option)

Post a comment
Log in to write reviews