2024-09-19 04:32:44

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ದರ್ಶನ್ ಸಿನಿಮಾ ಜೀವನಕ್ಕೆ ಕಂಟಕವಾಗುತ್ತಾ ಈ ಪ್ರಕರಣ..?

ಬೆಂಗಳೂರು: ಒಂದಲ್ಲಾ ಒಂದು ವಿವಾದದಿಂದ ಸದಾ ಸುದ್ದಿಯಲ್ಲಿರುವ ನಟ ದರ್ಶನ್,‌ ಈಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಕ್ಕಾಕಿಕೊಂಡಿದ್ದಾರೆ. ಈ ಸಂಬಂಧ ಪೊಲೀಸರು ನಟ ದರ್ಶನ್‌ರನ್ನು ಬಂಧಿಸಿದ್ದಾರೆ. ಈ ಪ್ರಕರಣ ದರ್ಶನ್‌ಗೆ ಉರುಳಾಗುವ ಎಲ್ಲಾ ಸಾಧ್ಯತೆಗಳು ಕಾಣಿಸುತ್ತಿದೆ. ಇತನ್ಮ್‌ಧ್ಯೆ ಕೊಲೆ ಪ್ರಕರಣ ದರ್ಶನ್ ಸಿನಿಮಾ ಜೀವನಕ್ಕೆ ಮುಳುವಾಗುತ್ತಾ ಎಂಬ ಪ್ರಶ್ನೆಗಳು ಹುಟ್ಟುಕೊಂಡಿವೆ.

ದರ್ಶನ್‌ ಸಿನಿಮಾಗಳಿಗೆ ಬೀಳುತ್ತಾ ಬ್ರೇಕ್‌..?
ಇತ್ತೀಚೆಗಷ್ಟೇ ದರ್ಶನ್‌ ಅಭಿನಯದ ಕಾಟೇರಾ ಸಿನಿಮಾ ಅದ್ಭುತ ಯಶಸ್ಸು ಕಂಡಿತ್ತು. ಹೀಗಾಗಿ ದರ್ಶನ್‌ ಕೈಯಲಿ ಸಾಲು ಸಾಲು ಚಿತ್ರಗಳ ಲಿಸ್ಟೇ ಇದೆ. ಆದ್ರೆ ಈಗ ಈ ಪ್ರಕರಣದಿಂದಾಗಿ ಎಲ್ಲಾ ಸಿನಿಮಾಗಳು ನಿಂತು ಹೋಗುವ ಭಯ ನಿರ್ಮಾಪಕರಲ್ಲಿ ಕಾಡಲು ಶುರುವಾಗಿದೆ.

ಅರ್ಧಕ್ಕೆ ನಿಂತು ಹೋಗುತ್ತಾ 'ಡೆವಿಲ್' ಸಿನಿಮಾ?
ಈ ವರ್ಷದ ಬಹುನಿರೀಕ್ಷಿತ ಸಿನಿಮಾ ಅಂದ್ರೆ ಅದು ಡೆವಿಲ್‌ ಸಿನಿಮಾ. ನಾಯಕ ನಟನಾಗಿ ದರ್ಶನ್ ಕಾಣಿಕೊಳ್ಳಲಿದ್ದು, ಈ ಚಿತ್ರದ ಶೂಟಿಂಗ್‌ ನಡೆಯುತ್ತಿದೆ. ಆದ್ರೆ ಈಗ ಈ ಪ್ರಕರಣದಿಂದಾಗಿ ಈ ಚಿತ್ರ ಅರ್ಧಕ್ಕೆ ನಿಂತು ಹೋಗುತ್ತಾ ಎಂಬ ಅನುಮಾನ ಮೂಡಿದೆ. ಇತ್ತೀಚಿಗಷ್ಟೇ ಡೆವಿಲ್ ಸಿನ್ಮಾ ಕ್ರಿಸ್‌ಮಸ್‌ಗೆ ರಿಲೀಸ್ ಎಂದು ದರ್ಶನ್‌ ಅನೌನ್ಸ್‌ ಮಾಡಿದ್ದರು. ಹೈ ವೋಲ್ಟೇಜ್ ಬಿಗ್ ಬಜೆಟ್ ಚಿತ್ರವಾಗಿರೋ ಡೆವಿಲ್, ಸುಮಾರು 50 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿದೆ. ಫಸ್ಟ್ ಲುಕ್ ನಲ್ಲಿ ವಿಲನ್ ಶೇಡ್ ನಲ್ಲಿ ದರ್ಶನ್‌ ಕಾಣಿಸಿಕೊಂಡಿದ್ದರು. ಜಯಮ್ಮ ನಿರ್ಮಾಣದ ಸಿನಿಮಾಗೆ ಮಿಲನ ಪ್ರಕಾಶ್‌ ಆಕ್ಷನ್‌ ಕಟ್‌ ಹೇಳಿದ್ದಾರೆ.

ಮತ್ತೆರಡು ಸಿನಿಮಾಗಳಿಗೆ ಬೀಳುತ್ತಾ ಬ್ರೇಕ್‌..?
ದರ್ಶನ್‌ ಅಭಿನಯದಲ್ಲಿ ಡೆವಿಲ್‌ ಮಾತ್ರವಲ್ಲದೇ ಇನ್ನೆರಡು ಸಿನಿಮಾ ಕೂಡ ತೆರೆಕಾಣಲಿದೆ. ಕೆವಿಎನ್ ಪ್ರೊಡಕ್ಷನ್ ಹಾಗೂ ಜೋಗಿ ಪ್ರೇಮ್ ಕಾಂಬಿನೇಷನ್‌ನಲ್ಲಿ ಈ ಸಿನಿಮಾ ತೆರೆ ಕಾಣಲಿದೆ. ಆದರೆ ಚಿತ್ರದ ಹೆಸರು ಇನ್ನೂ ಕೂಡ ರಿವಿಲ್‌ ಆಗಿಲ್ಲ.

ಮೀಡಿಯಾ ಹೌಸ್‌ ಪ್ರೊಡಕ್ಷನ್‌ ಹಾಗೂ ತರುಣ್‌ ಸುಧೀರ್‌ ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾ ತೆರೆಕಾಣಲಿದೆ. ಆದರೆ ಈ ಪ್ರಕರಣ ಈಗ ದರ್ಶನ್‌ಗೆ ಮುಳವಾಗಿದ್ದು, ಮುಂದಿನ ಅವರ ಸಿನಿಮಾಗಳಿಗೆ ಇದು ಎಫೆಕ್ಟ್‌ ಆಗುತ್ತಾ ಎಂಬ ಅನುಮಾನಗಳ ಚಿತ್ರರಂಗದಲ್ಲಿ ಕೇಳಿಬರುತ್ತಿವೆ.

Post a comment

No Reviews