2024-09-19 04:50:52

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ನಟ ನಿಧನ

ನವದೆಹಲಿ: ಹಿರಿಯ ನಟ ವಿಜಯ್ ಕದಂ ನಿಧನರಾಗಿದ್ದಾರೆ. ಕಳೆದ ಒಂದರಿಂದ ಒಂದೂವರೆ ವರ್ಷಗಳಿಂದ ಅವರು ಕ್ಯಾನ್ಸರ್ಕಾಯಿಲೆಯಿಂದ ಬಳಲುತ್ತಿದ್ದರು ಇಂದು ನಿಧನರಾಗಿದ್ದಾರೆ.

ಅವರ ನಿಧನದಿಂದ ಮರಾಠಿ ಉದ್ಯಮದಲ್ಲಿ ಶೋಕ ಮಡುಗಟ್ಟಿದೆ. ಕೆಲವು ತಿಂಗಳ ಹಿಂದಷ್ಟೇ ವಿಜಯ್ಅವರು ತಮ್ಮ ಕ್ಯಾನ್ಸರ್ ಚಿಕಿತ್ಸೆಯ ಬಗ್ಗೆ ಮಾತಾಡಿದ್ದರು. ಸಾಮಾನ್ಯ ಜನರು ಕ್ಯಾನ್ಸರ್ನಂತಹ ಕಾಯಿಲೆಯೊಂದಿಗೆ ಹೋರಾಡುವುದು ಎಷ್ಟು ಕಷ್ಟ ಎಂಬುದನ್ನು ಅಭಿಮಾನಿಗಳಿಗೆ ತಿಳಿಸಿದ್ರು. ಇದೀಗ ನಟ ವಿಜಯ್ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಸೋತಿದ್ದಾರೆ.   

ಮರಾಠಿ ಚಲನಚಿತ್ರಗಳಲ್ಲಿ ನಟಿಸಿದ್ದ ವಿಜಯ್​!

ವಿಜಯ್ ಕದಂ ಅನೇಕ ಮರಾಠಿ ಚಲನಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅವರ ನಿಧನದಿಂದ ಮರಾಠಿ ಚಿತ್ರರಂಗದಲ್ಲಿ ಶೋಕ ಮಡುಗಟ್ಟಿದೆ. 1980-90ರ ದಶಕದಲ್ಲಿ ವಿಜಯ್ ಕದಂ ಅವರು ಹಲವು  ಚಿತ್ರಗಳಲ್ಲಿ ನಟಿಸಿದ್ದರು. ಕಾಮಿಡಿ ಸ್ಟಾರ್​ ಆಗಿ ಸಿನಿಮಾಗಳಲ್ಲಿ ಮಿಂಚಿದ್ರು.  ಮರಾಠಿ ಚಿತ್ರರಂಗದಲ್ಲೊಇ ಬಹುಮುಖ ನಟ ಎಂದು ಹೆಸರಾಗಿದ್ದರು.

ಸೀರಿಯಲ್ಗಳಲ್ಲಿಯೂ ಮಿಂಚಿದ್ದ ವಿಜಯ್

ಮರಾಠಿ ಚಿತ್ರರಂಗದಲ್ಲಿ ಮಾತ್ರವಲ್ಲ, ವಿಜಯ್ ಕದಂ ಮರಾಠಿ ರಂಗಭೂಮಿಯನ್ನೂ ಚಿರಪರಿಚಿತರು. ಅವರು ಅನೇಕ ಹಿಟ್ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ಪ್ರವಾಸ, ಸಾಹಿ ದೇ ಸಾಹಿ, ವಿಚ್ಚಾ ಮಾಝಿ ಪುರಿ ಕರಾ, ಪಾಪ ಸಂಗ ಕುನಾಚೆ ಇವರ ಅತ್ಯಂತ ಜನಪ್ರಿಯ ಸೀರಿಯಲ್​ ಆಗಿದೆ. ತೇ ಪ್ರಧಾರ್ ಆಲಿಯೇ ಅವರ ಕೊನೆಯ ಧಾರಾವಾಹಿ. ಈ ಧಾರಾವಾಹಿಯಲ್ಲಿ ಅವರು ಬಾಬುರಾವ್ ತಾಂಡೇಲ್ ಪಾತ್ರವನ್ನು ನಿರ್ವಹಿಸಿದ್ದಾರೆ. ವಿಜಯ್ ಕದಂ ಹಲವು ವರ್ಷಗಳ ನಂತರ ಈ ಧಾರಾವಾಹಿಯಲ್ಲಿ ಪ್ರೇಕ್ಷಕರ ಮುಂದೆ ಬಂದಿದ್ದರು

 

 

 

Post a comment

No Reviews