2024-09-19 04:33:32

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಮಕ್ಕಳನ್ನು ಸ್ವಾಗತಿಸಿದ ಶಿಕ್ಷಕರು

ಬಬಲೇಶ್ವರ: ಮೊದಲ ದಿನವೇ ಶಾಲೆಗೆ ಬಂದ ಮಕ್ಕಳನ್ನು ಗುಣದಾಳ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕ ವೃಂದ ವಿಜೃಂಭಣೆಯಿಂದ ಸ್ವಾಗತಿಸಿದ್ದಾರೆ.
ವಿದ್ಯಾರ್ಥಿಗಳು ಶಾಲೆಗೆ ಉತ್ಸಾಹದಿಂದ ಬರುತ್ತಿರುವುದನ್ನ ಕಂಡ ಶಿಕ್ಷಕರು, ಮಕ್ಕಳನ್ನ ವಿಶೇಷವಾಗಿ ಸ್ವಾಗತಿಸಿದರು. ಶಾಲಾ ಆವರಣದ ಮುಖ್ಯ ದ್ವಾರವನ್ನು ತಳಿರು ತೋರಣಗಳಿಂದ ಅಲಂಕರಿಸಿ, ರಂಗೋಲಿ ಹಾಕಿ ವಿದ್ಯಾರ್ಥಿಗಳ ಸ್ವಾಗತಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಶಾಲಾ ಆಡಳಿತ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶಿವಪ್ಪ ಮಾಗಾರಿ, ಶರಣು ಸೊನ್ನದ, ಶಂಕ್ರಯ್ಯಾ ಮಠಪತಿ, ಭೀಮನಗೌಡ ಬಿರಾದಾರ ಇವರು ವಿದ್ಯಾರ್ಥಿಗಳಿಗೆ ಗುಲಾಬಿ ಪುಷ್ಪ ನೀಡುವ ಮೂಲಕ ಸ್ವಾಗತಿಸಿದರು. ಶಿಕ್ಷಕರಾದ ಎಸ್.ಎಲ್. ಕುಳ್ಳೊಳ್ಳಿ ಮತ್ತು  ಆರ್. ಎ. ಮುಲ್ಲಾ ಅವರು ವಿದ್ಯಾರ್ಥಿಗಳಿಗೆ  ಆರತಿ ಮಾಡುವ ಮೂಲಕ ಒಟ್ಟು 73 ವಿದ್ಯಾರ್ಥಿಗಳನ್ನ ಸ್ವಾಗತ ಮಾಡಿದರು.

Post a comment

No Reviews