2024-09-19 09:03:38

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ತುಂಬು ಗರ್ಭಿಣಿಯರನ್ನ 6 ಕಿಮೀ ಹೊತ್ತು ತಂದು ಆಸ್ಪತ್ರೆಗೆ ಸೇರಿಸಿದ ಊರಿನ ಜನ

ಚಾರ್ಲ,ತೆಲಂಗಾಣ : ತೀವ್ರ ಹೆರಿಗೆ ನೋವಿನಿಂದ ಇಬ್ಬರು ಗರ್ಭಿಣಿಯರು ಬಳಲುತ್ತಿದ್ದು, ಇವರನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಸೇರಿಸಲು ಈ ಊರಿನಲ್ಲಿ ರಸ್ತೆಯೇ ಇಲ್ಲದಂತಾಗಿದೆ. ಹೀಗಾಗಿ 6 ಕಿಮೀ ದೂರ ಹೊತ್ತು, ನಡೆದುಕೊಂಡೇ ಬಂದು ಮುಖ್ಯ ರಸ್ತೆಗೆ ತಲುಪಿ ಅಲ್ಲಿಂದ ಆಸ್ಪತ್ರೆಗೆ ಇಲ್ಲಿನ ಜನ ಅವರನ್ನು ಸೇರಿಸಿದ್ದಾರೆ. ತೆಲಂಗಾಣ ರಾಜ್ಯದ ಭದ್ರಾದ್ರಿ ಕೊತ್ತಗುಡೆಂನಲ್ಲಿ ಇಂತಹದ್ದೊಂದು ಘಟನೆ ಸೋಮವಾರ ನಡೆದಿದೆ.

ಇದ್ದಕ್ಕಿದ್ದಂತೆ ದೂರದ ಚಾರ್ಲ ಮಂಡಲದ ಭಟ್ಟಿಗುಡೆಂ ಗ್ರಾಮದ ರವ್ವ ಸುಬ್ಬಮ್ಮ ಮತ್ತು ರವ್ವ ದೇವಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಸರಿಯಾದ ರಸ್ತೆ ಇಲ್ಲದ ಕಾರಣ ಸುಮಾರು 6 ಕಿಲೋಮೀಟರ್ ವರೆಗೆ ಗಿರಿ ಜನರು ತಿಪ್ಪಾಪುರಕ್ಕೆ ಜೆಟ್ಟಿಯಲ್ಲಿ ಇಬ್ಬರನ್ನು ಸಾಗಿಸಿದ್ದಾರೆ. ಅಲ್ಲಿಂದ ಸತ್ಯನಾರಾಯಣಪುರಂ ಪಿಎಚ್‌ಸಿಗೆ ಆಟೋದಲ್ಲಿ ಕರೆದುಕೊಂಡು ಹೋಗಿದ್ದಾರೆ. ನಂತರ ಉತ್ತಮ ಚಿಕಿತ್ಸೆಗಾಗಿ ಭದ್ರಾಚಲಂ ಏರಿಯಾ ಆಸ್ಪತ್ರೆಗೆ ದಾಖಲಿಸಿ, ಇಲ್ಲಿನ ವೈದ್ಯಾಧಿಕಾರಿ ದಿವ್ಯನಯನ ಅವರು ಸುಬ್ಬಮ್ಮ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ಸದ್ಯ ಇಬ್ಬರು ಮಹಿಳೆಯರ ಸ್ಥಿತಿ ಸ್ಥಿರವಾಗಿದೆ.

ಬುಡಕಟ್ಟು ಜನಾಂಗದವರು ಸಂಚಾರಕ್ಕೆ ತೀವ್ರ ತೊಂದರೆ ಅನುಭವಿಸುತ್ತಿದ್ದರು. ಭಟ್ಟಿಗುಡೆಂ ಮತ್ತು ತಿಪ್ಪಾಪುರಂ ನಡುವಿನ ಅಂತರವು ಸರಿಸುಮಾರು 6 ಕಿಲೋಮೀಟರ್‌ಗಳು, 1 ಕಿಲೋಮೀಟರ್ ರಸ್ತೆ ನಿರ್ಮಾಣವಾಗಿದ್ದರೂ ಸಹ ಉಳಿದ 4 ಕಿಲೋಮೀಟರ್ ಮಾರ್ಗ ಎರಡು ವರ್ಷಗಳಿಂದ ಅಪೂರ್ಣವಾಗಿಯೇ ಉಳಿದಿದ್ದು, ಗ್ರಾಮಸ್ಥರಿಗೆ ಸಾರಿಗೆ ಸೌಲಭ್ಯ ಇಲ್ಲದಂತಾಗಿದೆ. ಸೋಮವಾರವೂ ಗರ್ಭಿಣಿಯರನ್ನು ಕೆಸರುಮಯವಾದ ಪ್ರದೇಶದಲ್ಲೇ ಹೊತ್ತು ತಿಪ್ಪಾಪುರಕ್ಕೆ ಕರೆತರಲಾಯಿತು. ಆ ಬಳಿಕ ಅಲ್ಲಿಂದ ಆಟೋ ಮಾಡಿ ಸತ್ಯನಾರಾಯಣಪುರಂ ಆಸ್ಪತ್ರೆಗೆ ದಾಖಲಿಸಲಾಯಿತು.

Post a comment

No Reviews