2024-09-19 04:56:13

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಲಂಕಾ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ

ಕೊಲಂಬೊ: ಕೊಲಂಬೊದ ಆರ್‌ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಲಂಕಾದ ಜೆಫ್ರಿ ವಾಂಡರ್ಸೆ ಅವರ ಸ್ಪಿನ್​ ದಾಳಿಗೆ ತತ್ತರಿಸಿದ ಭಾರತ ತಂಡ 32 ರನ್​ಗಳ ಸೋಲು ಕಂಡಿದೆ. ಗೆಲ್ಲಬೇಕಿದ್ದ ಮೊದಲ ಪಂದ್ಯವನ್ನು ಕೈಚೆಲ್ಲಿದ್ದ ತಂಡ ಮೂರು ಪಂದ್ಯಗಳ ಸರಣಿಯಲ್ಲಿ 1-0 ಯಿಂದ ಹಿನ್ನಡೆ ಅನುಭವಿಸಿತು.

ಜೆಫ್ರಿ ವಾಂಡರ್ಸೆ ಅವರ ಸ್ಪಿನ್​ ದಾಳಿಗೆ ರೋಹಿತ್​ ಶರ್ಮಾ, ಅಕ್ಷರ್​ ಪಟೇಲ್​​, ಶುಭ್​​ಮನ್​ ಗಿಲ್​​ ಹೊರತುಪಡಿಸಿ ಉಳಿದೆಲ್ಲಾ ಬ್ಯಾಟರ್​ಗಳು ನಿರುತ್ತರವಾದರು. ಶಿವಂ ದುಬೆ, ಕೆಎಲ್​​ ರಾಹುಲ್​ ಸೊನ್ನೆಗೆ ಔಟಾದರೆ, ಭಾರತ ತಂಡದ ಕೇಂದ್ರ ಬಿಂದುವಾಗಿರು ವಿರಾಟ್​ ಕೊಹ್ಲಿ 14 ಗೆ ಔಟ್‌ ಆಗಿ ನಿರಾಸೆಗೊಳಿಸಿದರು. ಹಾಗೆ ಶ್ರೇಯಸ್​ ಅಯ್ಯರ್​ 7 ವಾಷಿಂಗ್ಟನ್​ ಸುಂದರ್​ 15 ರನ್​ ಗಳಿಸುವಷ್ಟರಲ್ಲಿ ಸುಸ್ತಾದರು. ಟಾಸ್​ ಗೆದ್ದ ಮೊದಲು ಬ್ಯಾಟ್​ ಮಾಡಿದ ಲಂಕಾ ಪಡೆ 9 ವಿಕೆಟ್​ಗೆ 240 ರನ್​ ಗಳಿಸಿತು. ಸಾಧಾರಣ ಗುರಿ ಬೆನ್ನಟ್ಟುವಲ್ಲಿ ವಿಫಲವಾದ ಭಾರತ ಬ್ಯಾಟಿಂಗ್​ ವೈಫಲ್ಯ ಅನುಭವಿಸಿ 42.2 ಓವರ್​ಗಳಲ್ಲಿ 208 ರನ್​ಗೆ ಸರ್ವಪತನ ಕಂಡಿತು.

ಉತ್ತಮ ಆರಂಭ, ದಿಢೀರ್​ ಕುಸಿತ: ಸಾಧಾರಣ ಗುರಿ ಬೆನ್ನತ್ತಿ ಹೊರಟ ಟೀಂ ಇಂಡಿಯಾದ ನಾಯಕ ರೋಹಿತ್​ ಶರ್ಮಾ ಆರಂಭದಲ್ಲೇ ಬಿರುಸಿನ ಆಟ ಪ್ರದರ್ಶಿಸಿ ಲಂಕಾ ಪಡೆಗೆ ನಡುಕವನ್ನುಂಟುಮಾಡಿದರು. ಆರಂಭಿಕ ಪ್ರದರ್ಶನ ನೀಡಿದ ಶರ್ಮಾ ಮತ್ತು ಗಿಲ್‌ 10 ಓವರ್​ಗಳ ಪವರ್​ಪ್ಲೇನಲ್ಲಿ 76 ರನ್​ ಗಳಿಸಿದರು. ಹಾಗೆ ಮುಂದುವರೆದ ಈ ಜೋಡಿ ಮೊದಲ ವಿಕೆಟ್​ಗೆ 97 ರನ್​ ಗಳಿಸಿತು. 44 ಎಸೆತಗಳಲ್ಲಿ 64 ರನ್‌ ಸಿಡಿಸಿದ ನಾಯಕ ರೋಹಿತ್‌ಗೆ ಕಡಿವಾಣ ಹಾಕಬೇಕೆಂದು ಬಂದ ವಾಂಡೆರ್ಸಿ ರೋಹಿತ್‌ರನ್ನು ತಡೆಯುವಲ್ಲಿ ಸಫಲರಾದರು. ಅದಾದ ಬಳಿಕ ತಂಡ ದಿಢೀರ್​ ಕುಸಿತ ಕಾಣಲು ಶುರು ಮಾಡಿತು. ಇದರ ಬೆನ್ನಲ್ಲೇ ಶುಭ್​ಮನ್​ಗಿಲ್​ 35 ರನ್​ಗೆ ವಿಕೆಟ್​ ಅದೇ ಸ್ಪಿನ್ನರ್​ಗೆ ಬಲಿಯಾದರು.

97 ರನ್​ಗೆ 1 ವಿಕೆಟ್​ ಕಳೆದುಕೊಂಡಿದ್ದ ಭಾರತ ತಂಡ, ಉಳಿದ 9 ವಿಕೆಟ್​ಗೆ ಗಳಿಸಿದ್ದು ಕೇವಲ 101 ರನ್. ತೀವ್ರ ಕುಸಿತ ಅನುಭವಿಸಿದ ತಂಡಕ್ಕೆ ಅಕ್ಷರ್​ ಪಟೇಲ್​ (44) ಕೊಂಚ ನೆರವಾದರು. ಅಸಲಂಕಾ ಬೌಲಿಂಗ್​ನಲ್ಲಿ ಅಕ್ಷರ್​ ಔಟಾದ ಬಳಿಕ ತಂಡ ಕೆಲವೇ ನಿಮಿಷಗಳಲ್ಲಿ ಆಲೌಟ್​ ಆಯಿತು.

ವಾಂಡೆರ್ಸೆ ಸ್ಪಿನ್​ ಜಾದು: ನಿನ್ನೆ ಪಂದ್ಯದಲ್ಲಿ 34 ವರ್ಷದ ಜೆಫ್ರಿ ವಾಂಡೆರ್ಸೆ ಭಾರತ ತಂಡಕ್ಕೆ ಅಕ್ಷರಶಃ ಕಂಟಕವಾಗಿ ಕಾಡಿದರು. 10 ಓವರ್​ಗಳಲ್ಲಿ 33 ರನ್​ ಬಿಟ್ಟುಕೊಟ್ಟು 6 ವಿಕೆಟ್​ ಕಿತ್ತರು. ನಾಯಕ ಚರಿತ ಅಸಲಂಕಾ ಕೊನೆಯಲ್ಲಿ 3 ವಿಕೆಟ್​ ಗಳಿಸಿ ಭಾರತ ತಂಡಕ್ಕೆ ಸೋಲುಣಿಸಿದರು. ಮೂರನೇ ಮತ್ತು ಕೊನೆಯ ಪಂದ್ಯ ಇದೇ ಆರ್‌ ಪ್ರೇಮದಾಸ ಮೈದಾನದಲ್ಲಿ ಆಗಸ್ಟ್ 7 ರಂದು ನಡೆಯಲಿದೆ.

Post a comment

No Reviews