2024-09-19 04:35:25

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಅಂಗನವಾಡಿ ಬಿಸಿ ಊಟಕ್ಕೆ ಕೊಳಚೆ ನೀರು : ವಿಜಯನಗರ

ಒಳಚರಂಡಿ ನೀರು ಮಿಶ್ರಣಗೊಂಡ ಕೊಳವೆ ಬಾವಿಯ ನೀರನ್ನು ಅಂಗನವಾಡಿ ಮಕ್ಕಳ ಬಿಸಿ ಊಟಕ್ಕೆ ಬಳಸುತ್ತಿರುವ ಆತಂಕಕಾರಿ ಸುದ್ದಿ ವಿಜಯನಗರದ ಕೂಡ್ಲಿಗಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಬಣವಿಕಲ ಗ್ರಾಮದ ಕೆರೆಗೆ, ಊರಿನ ಚರಂಡಿ ನೀರು ಸೋರಿಕೆಯಾಗಿ ಕೊಳವೆ ಬಾವಿಯ ನೀರಿನೊಂದಿಗೆ ಮಿಶ್ರಣವಾಗಿದ್ದು ಈ ಕಲುಷಿತ ನೀರನ್ನೇ ಊರಿನವರು ಬಳಸುತ್ತಿದ್ದು, ಜೊತೆಗೆ ಅಂಗನವಾಡಿಯ ಬಿಸಿಯೂಟಕ್ಕೂ ಬಳಕೆಯಾಗುತ್ತಿದೆ.

ತೆರೆದ ಬಾವಿ ಮತ್ತು ಒಂದು ಕೊಳವೆ ಬಾವಿ ಇದ್ದು ಇವೆರೆಡು ಕೊಳಚೆ ನೀರಿನ ಮಿಶ್ರಣದಿಂದ ಕಲುಷಿತವಾಗಿದೆ. ಪರ್ಯಾಯ ಮಾರ್ಗವಿಲ್ಲದೆ ಇಲ್ಲಿನ ಗ್ರಾಮಸ್ಥರು ಇದೇ ನೀರನ್ನು ಅಡುಗೆ ಸಹಿತ ದಿನನಿತ್ಯದ ಅವಶ್ಯಕತೆಗೆ ಬಳಸುತ್ತಿದ್ದಾರೆ.

ಅಂಗನವಾಡಿಯ ಬಡ ಮಕ್ಕಳ ಮಧ್ಯಾನ್ನದ ಬಿಸಿ ಊಟದ ತಯಾರಿಕೆಗೂ ಇದೇ ಕಲುಷಿತ ನೀರು ಬಳಸುತ್ತಿದ್ದು, ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುವ ಆತಂಕ ಉಂಟಾಗಿದೆ.

ಪರಿಸ್ಥಿತಿ ಕೈ ಮೀರಿ ಹೋಗುತ್ತಿದ್ದರೂ ಸ್ಥಳೀಯ ಗ್ರಾಮ ಪಂಚಾಯತಿ ಅಧಿಕಾರಿಗಳು ಇದರ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಊರಿನ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಧ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಗ್ರಾಮ ಪಂಚಾಯತಿ ಶೀಘ್ರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಉಗ್ರ ಹೋರಾಟ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

Post a comment

No Reviews