
ದೆಹಲಿ;ಸಂಸದ ರಾಹುಲ್ ಗಾಂಧಿ ಇಂದು (ಜುಲೈ8)ಸೋಮವಾರ ಮಣಿಪುರದ ಜಿರಿಬಾಮ್ ಜಿಲ್ಲೆಯಿಂದ ಅಸ್ಸಾಂನಲ್ಲಿ ಆಶ್ರಯ ಪಡೆದಿರುವ ಜನರನ್ನು ಭೇಟಿ ಮಾಡಿದರು. ಬೆಳಗ್ಗೆ 10 ಗಂಟೆ ಸುಮಾರಿಗೆ ಸಿಲ್ಚಾರ್ ವಿಮಾನ ನಿಲ್ದಾಣವನ್ನು ತಲುಪಿದ ರಾಹುಲ್ ಗಾಂಧಿ ತಲೈನಲ್ಲಿನ ಪರಿಹಾರ ಶಿಬಿರದಲ್ಲಿ ತಂಗಿರುವ ಜನರನ್ನು ಭೇಟಿ ಮಾಡಲು ಕ್ಯಾಚಾರ್ನ ಲಖಿಪುರದ ಹ್ಮಾರ್ಖಾವ್ಲಿಯನ್ ಪ್ರದೇಶಕ್ಕೆ ತೆರಳಿದರು. ತಮ್ಮ ಭೇಟಿಯ ವೇಳೆ ಅಲ್ಲಿ ನೆಲೆಸಿದ್ದ ಜನರೊಂದಿಗೆ ಮಾತನಾಡಿದ ಅವರು ಅವರ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುವುದಾಗಿ ಭರವಸೆ ನೀಡಿದರು.
Poll (Public Option)

Post a comment
Log in to write reviews