
ಹೊಸದಿಲ್ಲಿ: ಲೊಕಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು ಪ್ರಧಾನಿ ನರೇಂದ್ರ ಮೋದಿ ಮೂರನೆ ಬಾರಿಗೆ ದೇಶದ ಗದ್ದುಗೆ ಅಲಂಕರಿಸುವುದು ಖಚಿತವಾಗಿದೆ. ಅನೇಕ ದೇಶ ನಾಯಕರು ಪ್ರಧಾನಿ ಮೋದಿಗೆ ಶುಭ ಕಾಮನೆಗಳನ್ನ ತಿಳಿಸಿದ್ದಾರೆ. ಆದರೆ ಇತ್ತ ದೇಶದ ವಿವಿಧ ನಾಯಕರು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಹುದ್ದೆ ಏರುವುದನ್ನ ತೀವ್ರವಾಗಿ ವಿರೋಧಿಸುತ್ತಿದ್ದಾರೆ.
ಮೋದಿ ನೇತೃತ್ವದ ಬಿಜೆಪಿಯ ಈ ಬಾರಿ ಬಹುಮತ ಗಳಿಸದೇ ಇರುವುದರಿಂದ ಪ್ರಧಾನಿ ಮೋದಿ ತಾವಾಗಿಯೇ ಹುದ್ದೆಯಿಂದ ಕೆಳಗಿಳಿಯಬೇಕು ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಯಾವುದೇ ಆತ್ಮಗೌರವ ಇರುವ ನಾಯಕ ತಾನೇ ಮುಂದಾಗಿ ಹುದ್ದೆ ತೊರೆಯಬೇಕೇ ಹೊರತು, ಹೊರ ದಬ್ಬಿಸಿಕೊಳ್ಳಬಾರದು, ಎಂದು ವ್ಯಂಗ್ಯವಾಡಿದ್ದಾರೆ.
Poll (Public Option)

Post a comment
Log in to write reviews