2024-09-19 05:03:35

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ನನ್ನ ರಾಜಕೀಯ ಅಂತ್ಯದ ತೀರ್ಮಾನ ಜನರದ್ದು : ಡಿ.ಕೆ. ಶಿವಕುಮಾರ್

ಬೆಂಗಳೂರು: ಚನ್ನಪಟ್ಟಣ ಕ್ಷೇತ್ರದಿಂದ ಡಿ‌.ಕೆ. ಶಿವಕುಮಾರ್ ಸ್ಪರ್ಧಿಸಿದರೆ ರಾಜಕೀಯ ಅಂತ್ಯ" ಎನ್ನುವ ಸಿ.ಪಿ. ಯೋಗೇಶ್ವರ್ ಹೇಳಿಕೆಗೆ ಪ್ರತಿಕ್ರಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್ "ನನ್ನ ರಾಜಕೀಯ ಅಂತ್ಯ ತೀರ್ಮಾನ ಮಾಡುವುದು ಜನರು ಎಂದು ತಿರುಗೇಟು ನೀಡಿದ್ದಾರೆ.
10ನೇ ಅಂತಾರಾಷ್ಟ್ರೀಯ ಯೋಗದಿನಾಚರಣೆ ನಿಮಿತ್ತ ವಿಧಾನಸೌಧದ ಮುಂಭಾಗದಲ್ಲಿ ನಡೆದ ಯೋಗೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ದೊಡ್ಡವರಿಗೆಲ್ಲ ನಾನು ಮಾತನಾಡಲು ಹೋಗಲ್ಲ, ನನಗೆ ಸಮಯವಿಲ್ಲ. ನನಗೆ ಶಕ್ತಿ ಕೊಡಿ ಅಂತ ನಾನು ಮತದಾರರಿಗೆ ಕೇಳಿಕೊಂಡಿದ್ದೇನೆ. ನನ್ನ ಹಿಂದೆ‌ ಒಂದು ಶಕ್ತಿ‌ ಇದೆ. ಜನ ಇದ್ದಾರೆ. ಅವರು ನೋಡಿಕೊಳ್ಳುತ್ತಾರೆ. ನನ್ನ ಅಂತ್ಯ ಬರೆಯುವವರು ಜನರು. ವಿಶ್ವಾಸ ಇದ್ದರೆ ಮತ ಹಾಕುತ್ತಾರೆ" ಎಂದು ಹೇಳಿದರು.
ಕನಕಪುರದಲ್ಲಿ ಉಪ ಚುನಾವಣೆ ಬಂದರೆ ದೇಶದ ಸಂಪತ್ತು ಹಾಳಾಗುತ್ತದೆ ಎನ್ನುವ ಶಾಸಕ ಸುರೇಶ್ ಕುಮಾರ್ ಹೇಳಿಕೆಗೂ ಪ್ರತಿಕ್ರಿಯಿಸಿದ ಡಿಕೆಶಿ "ನಾನು ಕನಕಪುರದ ಎಂಎಲ್ಎ, ಪಕ್ಷದ ಅಧ್ಯಕ್ಷ ಸಹ 'ನನಗೂ‌ ಜವಾಬ್ದಾರಿ ಇದೆ'. ಎಲ್ಲಾ ನನ್ನದೇ ಕ್ಷೇತ್ರ, ನನ್ನದೇ ನಾಯಕತ್ವ. ನಾನು, ಸಿಎಂ ಸಿದ್ದರಾಮಯ್ಯ ಜೊತೆಗೂಡಿ‌ ಎಲೆಕ್ಷನ್‌ ಮಾಡುತ್ತೇವೆ" ಎಂದರು.

Post a comment

No Reviews