2024-09-19 04:55:09

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಲವ್ವರ್ ಬಾಯ್ ಆಗಿ ಮಾಸ್ ಅವತಾರ ತಾಳಿದ ನಿರೂಪ್ ಭಂಡಾರಿ

‘ರಂಗಿತರಂಗ’, ‘ವಿಂಡೋ ಸೀಟ್’, ‘ರಾಜರಥ’ ಅಂಥಹಾ ಸಿನಿಮಾಗಳಲ್ಲಿ ಚಾಕೋಲೆಟ್ ಬಾಯ್, ಲವರ್ ಬಾಯ್ ಪಾತ್ರಗಳಲ್ಲಿ ಮಿಂಚಿದ್ದ ಸ್ಪುರದ್ರೂಪಿ ನಟ ನಿರೂಪ್ ಭಂಡಾರಿ, ಈಗ ಲಾಂಗ್ ಹಿಡಿದು ಮಾಸ್ ಅವತಾರ ತಾಳಿದ್ದಾರೆ. ಕೈಗೆ ಕೋಳ, ರಕ್ತದಲ್ಲಿ ಅದ್ದಿದ ಮುಖ, ಕಣ್ಣಿಗೊಂದು ಕೂಲಿಂಗ್ ಗ್ಲಾಸು, ಕುರುಚಲು ಗಡ್ಡ ಇದು ನಿರೂಪ್ ಭಂಡಾರಿಯ ಹೊಸ ಸಿನಿಮಾದ ಲುಕ್. ‘ಅತಿಕಾಯ’ ಹೆಸರಿನ ಹೊಸ ಸಿನಿಮಾಕ್ಕಾಗಿ ಹೀಗೆ ಮಾಸ್ ಅವತಾರ ತಾಳಿದ್ದಾರೆ ನಿರೂಪ್ ಭಂಡಾರಿ.

ಈಗ ‘ಅತಿಕಾಯ’ ಸಿನಿಮಾ ಮೂಲಕ ನಿರ್ದೇಶಕನ ಕುರ್ಚಿಗೆ ಮರಳಿದ್ದಾರೆ. ತಮ್ಮ ಈ ಹಿಂದಿನ ಸಿನಿಮಾಗಳಿಗಿಂತಲೂ ಭಿನ್ನವಾದ ಕತೆಯೊಂದಿಗೆ ಮರಳಿದ ನಾಗರಾಜ್ ಪೀಣ್ಯ ಅವರು ನಿರೂಪ್ ಭಂಡಾರಿ ಕೈಗೆ ಮಚ್ಚು ನೀಡಿರುವ ನಿರ್ದೇಶಕ ‘ಪದೇ ಪದೇ’, ‘ನಮಕ್‌ಹರಾಮ್’ ಇನ್ನೂ ಕೆಲವು ಸಿನಿಮಾಗಳನ್ನು ನಿರ್ದೇಶಿಸಿ ಅನುಭವವಿರುವ ನಾಗರಾಜ್ ಪೀಣ್ಯ ಕೆಲ ಕಾಲ ಚಿತ್ರರಂಗದಿಂದ ಮರೆಯಾಗಿದ್ದರು ಎನ್ನಲಾಗಿದೆ.

ಅವರ ಈ ಹಿಂದಿನ ಸಿನಿಮಾ ಹಾಗೂ ಪಾತ್ರಗಳಿಗಿಂತಲೂ ಬಹಳ ಭಿನ್ನವಾಗಿ ಈ ಸಿನಿಮಾ ಇರಲಿದೆ. ಸಿನಿಮಾದ ಬಗ್ಗೆ ಮಾತನಾಡಿರುವ ನಾಗರಾಜ್ ಪೀಣ್ಯ, ‘ಈ ಸಿನಿಮಾದಲ್ಲಿ ಭಿನ್ನ ನಿರೂಪ್ ಭಂಡಾರಿಯನ್ನು ಪ್ರೇಕ್ಷಕರು ನೋಡಲಿದ್ದಾರೆ.  ಪಾತ್ರಕ್ಕಾಗಿ ನಿರೂಪ್ ಭಂಡಾರಿ ಸಾಕಷ್ಟು ಶ್ರಮ ಹಾಕಿದ್ದಾರೆ. ಜಿಮ್​ನಲ್ಲಿ ಸತತವಾಗಿ ಬೆವರಿಳಿಸಿದ್ದಾರೆ. ಈ ಸಿನಿಮಾದಲ್ಲಿ ಅವರ ಸಂಭಾಷಣಾ ಶೈಲಿ ಸಹ ಭಿನ್ನವಾಗಿರಲಿದೆ. ‘ಅತಿಕಾಯ’ ಸಿನಿಮಾ ಸಹ ಬಹಳ ರಗಡ್ ಆಗಿರಲಿದೆ’ ಎಂದಿದ್ದಾರೆ. ಸಿನಿಮಾದ ಕ್ಯಾಮೆರಾ ಕೆಲಸವನ್ನು ಉದಯಲೀಲ ಮಾಡುತ್ತಿದ್ದಾರೆ. ಶ್ರೀನಿವಾಸ್ ಪಿ ಬಾಬು ಎಡಿಟ್ ಮಾಡಲಿದ್ದು, ಸತೀಶ್ ಆರ್ಯನ್ ಸಂಗೀತ ನೀಡುತ್ತಿದ್ದಾರೆ.

 

 

Post a comment

No Reviews