2024-09-19 04:36:05

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಕತ್ತು ಸೀಳಿ ಬಾಲಕನ ಕೊಲೆ: ಆರೋಪಿಗಾಗಿ ಪೊಲೀಸರ ಶೋಧ

ಚಿಕ್ಕಬಳ್ಳಾಪುರ : ಮೂರು ವರ್ಷದ ಮಗುವಿನ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ  ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಬಟ್ಲಹಳ್ಳಿ ಯಲ್ಲಿ ನಡೆದಿದೆ. ಮಂಜುನಾಥ ದಂಪತಿ ಪುತ್ರ ಗೌತಮ್ (3) ಹತ್ಯೆಯಾದ ಮಗು ಸ್ವತಃ ಮಗುವಿನ ಚಿಕ್ಕಪ್ಪ ರಂಜಿತ್ (30) ಕೊಲೆ ಆರೋಪಿ. 
ಮಂಜುನಾಥ ಅವರ ಮನೆಗೆ ಬಂದ ಆರೋಪಿ ರಂಜಿತ್ ಊಟ ಮಾಡಿ ಸಂಜೆ ಐದು ಗಂಟೆ ಸಮಯದಲ್ಲಿ ಗೌತಮ್‌ ನನ್ನು ಮನೆಯ ಬಳಿ ಇರುವ ಪಾಳುಬಿದ್ದ ಹಳೆಯ ಮನೆಯೊಂದರೊಳಗೆ ಕರೆದೊಯ್ದು ಕತ್ತು ಕೊಯ್ದು ಹತ್ಯೆ ಮಾಡಿರುವುದಾಗಿ ತಿಳಿದು ಬಂದಿದೆ. ಮಂಜುನಾಥ ಅವರ ಚಿಕ್ಕಪ್ಪನ ಮಗನಾಗಿರುವ ಆರೋಪಿ ರಂಜಿತ್, ಎಂಜಿನಿಯರಿಂಗ್ ಪದವೀಧರ. ಮೂರು ತಿಂಗಳಿಂದಲೂ ಕಾಯಲಹಳ್ಳಿಯಲ್ಲಿ ಮನೆ ನಿರ್ಮಿಸುತ್ತಿದ್ದ ರಂಜಿತ್, ಮಂಜುನಾಥ ಅವರ ಮನೆಯಲ್ಲಿ ವಾಸವಿದ್ದು, ಅಲ್ಲೆ ಊಟ ತಿಂಡಿ ಮಾಡುತ್ತಿದ್ದ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿಗಳಾದ ಡಿ ಎಲ್ ನಾಗೇಶ್.ಅಡಿಷನಲ್ ಎಸ್ಪಿ ಖಾಸಿಂ ಖಾನ್.ಡಿ ವೈ ಎಸ್ ಪಿ. ಪಿ ಮುರಳೀಧರ. ಬಟ್ಲಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ,ಪರಿಶೀಲನೆ ನಡೆಸಿ, ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.

Post a comment

No Reviews