
ಚೆನ್ನೈ: ಪಾದಚಾರಿಯ ಮೇಲೆ ಕಾರು ಹರಿಸಿ ಹತ್ಯೆಗೈದಿರುವ ಘಟನೆ ಚೆನ್ನೈನಲ್ಲಿ ನಡೆದಿದ್ದು, ಈ ಕೃತ್ಯವನ್ನು ಸಂಸದರೊಬ್ಬರ ಮಗಳೇ ಮಾಡಿರುವುದಾಗಿ ಎಲ್ಲೆಡೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಆಂಧ್ರಪ್ರದೇಶದ ವೈಎಸ್ಆರ್ಸಿ ಪಕ್ಷದ ಸಂಸದ “ಬೀಡಾ ಮಸ್ತಾನ್ ರಾವ್” ಪುತ್ರಿ ʻಮಾಧುರಿʼ ತಮ್ಮ ಸ್ನೇಹಿತರೊಟ್ಟಿಗೆ ಬಿಎಂಡಬ್ಲ್ಯೂ ಕಾರಿನಲ್ಲಿ ತೆರಳುತ್ತಿದ್ದ ವೇಳೆ, ಕುಡಿದ ಮತ್ತಿನಲ್ಲಿ ಫುಟ್ ಪಾತ್ ಮೇಲೆ ಕಾರು ಚಲಾಯಿಸಿದ್ದಾರೆ. ಈ ವೇಳೆ ಫುಟ್ ಪಾತ್ ನಲ್ಲಿ ಮಲಗಿದ್ದ ವ್ಯಕ್ತಿಯ ಮೇಲೆ ಕಾರು ಹರಿದು ವ್ಯಕ್ತಿಯು ಸ್ಥಳದಲ್ಲೇ ಸಾವನಪ್ಪಿದ್ದಾನೆ.
ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಪಘಾತ ಎಸಗಿದ ಮಾಧುರಿ ಮತ್ತವರ ಸ್ನೇಹಿತರನ್ನು ಬಂಧಿಸುತ್ತಾರೆ. ಸದ್ಯ ಪ್ರಕರಣ ವಿಚಾರಣೆ ಹಂತದಲ್ಲಿದ್ದು,ಮಾಧುರಿ ಜಾಮೀನಿನ ಮೇಲೆ ಹೊರ ಬಂದಿದ್ದಾರೆ.
Poll (Public Option)

Post a comment
Log in to write reviews