2024-09-19 04:39:40

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

T20 ವಿಶ್ವಕಪ್ ವಿಜಯೋತ್ಸವ ಮೆರವಣಿಗೆಯಲ್ಲಿ ಹಲವು ಮಂದಿಗೆ ಗಾಯ

ಮುಂಬೈ: T20 ವಿಶ್ವಕಪ್ ಗೆದ್ದ ಭಾರತದ ಆಟಗಾರರನ್ನು ಸ್ವಾಗತಿಸಲು ವಿಜಯೋತ್ಸವದ ಮೆರವಣಿಗೆಯನ್ನು ಮುಂಬೈನ ಮರೈನ್ ಡ್ರೈವ್‌ನಲ್ಲಿ ಆಯೋಜಿಸಲಾಗಿದ್ದು ಈ ವೇಳೆ ನೂಕು ನುಗ್ಗಲಾಗಿ ಹಲವು ಮಂದಿಗೆ ಗಾಯಗಳಾಗಿವೆ.
ರೋಹಿತ್ ಶರ್ಮಾ ನೇತೃತ್ವದ ತಂಡ ಮರೈನ್ ಡ್ರೈವ್ನಿಂದ ಬಸ್ ಪರೇಡ್‌ಗೆ ಚಾಲನೆ ನೀಡಿತು. ಭಾರತ ತಂಡದ ಆಟಗಾರರನ್ನು ಸ್ವಾಗತಿಸಲು ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳು ಜಮಾಯಿಸಿದ್ದರು. ತೆರೆದ ಬಸ್ಸಿನಲ್ಲಿ ಆಟಗಾರರು ಈ ಪ್ರಯಾಣವನ್ನು ಸಂಪೂರ್ಣವಾಗಿ ಆನಂದಿಸಿದರು. ಈ ವಿಜಯೋತ್ಸವದ ಮೆರವಣಿಗೆಯೂ ಕೆಲ ಅಭಿಮಾನಿಗಳಿಗೆ ಸಮಸ್ಯೆಯಾಯಿತು. ಜನಸಂದಣಿಯಿಂದಾಗಿ ಕೆಲವು ಕ್ರಿಕೆಟ್ ಅಭಿಮಾನಿಗಳು ಗಾಯಗೊಂಡರು ಮತ್ತು ಕೆಲವರು ಉಸಿರಾಟದ ತೊಂದರೆ ಅನುಭವಿಸಿದರು ಎನ್ನಲಾಗಿದೆ.

Post a comment

No Reviews