
ತಿರುವನಂತಪುರಂ: ಮದ್ಯ ಸೇವಿಸಿ ತಮ್ಮ ಕಾರನ್ನು ಅಡ್ಡಾದಿಡ್ಡಿ ಚಲಾಯಿಸಿ, ದ್ವಿಚಕ್ರ ವಾಹನವೊಂದಕ್ಕೆ ಢಿಕ್ಕಿ ಹೊಡೆದ ಆರೋಪದ ಮೇಲೆ ಮಲಯಾಳಂ ನಟ ಬೈಜು ಸಂತೋಷ್ ರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಘಟನೆಯು ನಿನ್ನೆ ರಾತ್ರಿ 11.45ರ ವೇಳೆಗೆ ತಿರುವನಂತಪುರಂನ ಮ್ಯೂಸಿಯಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೌದಿಯಾರ್-ವೆಲ್ಲಯಂಬಲಂ ರಸ್ತೆಯಲ್ಲಿ ನಡೆದಿದೆ.
ಸುದ್ದಿ ತಿಳಿಯುತ್ತಿದ್ದಂತೆಯೆ ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು, ಬೈಜು ಸಂತೋಷ್ ರನ್ನು ವಶಕ್ಕೆ ಪಡೆದು, ಸೋಮವಾರ ಮುಂಜಾನೆ 12.30ರ ವೇಳೆಗೆ ಅವರನ್ನು ಬಂಧಿಸಿದ್ದಾರೆ.
ನಂತರ, ಬೈಜು ಸಂತೋಷ್ ಅವರನ್ನು ಠಾಣಾ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದ್ದು, ಅವರ ಕಾರನ್ನು ವಶಕ್ಕೆ ಪಡೆಯಲಾಗಿದೆ.
Poll (Public Option)

Post a comment
Log in to write reviews