
ಉತ್ತರ ಪ್ರದೆಶ: ಗುಡುಗು ಸಹಿತ ಭಾರೀ ಮಳೆಯಾಗಿದ್ದು ಸಿಡಿಲು ಬಡಿತಕ್ಕೆ ಒಂದೇ ದಿನ 37 ಜನರು ಸಾವನ್ನಪ್ಪಿರುವ ಘಟನೆ ಮೈನ್ಪುರಿಯಲ್ಲಿ ನಡೆದಿದೆ.
ಬೇವಾರ್ ಪ್ರದೇಶದ ನಾಗ್ಲಾ ಪೈತ್ ಗ್ರಾಮದಲ್ಲಿ, 22 ವರ್ಷದ ದೀಪ್ ಚಂದ್ರ, ಮಳೆಯಿಂದ ರಕ್ಷಣೆ ಪಡೆಯಲು ದೇವಾಲಯದಲ್ಲಿ ಕುಳಿತಿದ್ದಾಗ ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೊಂದು ಘಟನೆಯಲ್ಲಿ, 22 ವರ್ಷದ ಮೋನು ಶಾಕ್ಯ ಎಂಬಾತ ತನ್ನ ತಂದೆಯೊಂದಿಗೆ ಟೆರೇಸ್ ನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾನೆ. ಹೀಗೆ ಉತ್ತರ ಪ್ರದೇಶದ ಹಲವೆಡೆ ತೀವ್ರ ಗುಡುಗಿಗೆ ಒಟ್ಟಾರೆ ಒಂದೇ ದಿನ 37 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
Poll (Public Option)

Post a comment
Log in to write reviews