ಪ್ರಧಾನಿ ಚುಕ್ಕಾಣಿ ಹಿಡಿದ 10 ದಿನಗಳಲ್ಲಿ ನಳಂದ ವಿವಿ ಕ್ಯಾಂಪಸ್ ಉದ್ಘಾಟನೆ!

ನವದೆಹಲಿ : ಪ್ರಧಾನಿಯಾದ 10 ದಿನಗಳಲ್ಲೇ ನಳಂದಕ್ಕೆ ಭೇಟಿ ನೀಡುವ ಅವಕಾಶ ನನಗೆ ಸಿಕ್ಕಿದ್ದಕ್ಕೆ ಸಂತೋಷವಾಗಿದೆ ಎಂದು ಮೋದಿ ಹೇಳಿದ್ದಾರೆ.
ನಳಂದ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ಉದ್ಘಾಟಿಸಿ ಮಾತನಾಡಿದ ಮೋದಿ "ನಳಂದ ಕೇವಲ ಒಂದು ಹೆಸರಲ್ಲ, ಅದು ಒಂದು ಅಸ್ಮಿತೆ ಮತ್ತು ಗೌರವ. ನಳಂದ ಒಂದು ಮೌಲ್ಯ ಮತ್ತು ಮಂತ್ರ. ಬೆಂಕಿಯು ಪುಸ್ತಕಗಳನ್ನು ಸುಡಬಹುದು ಆದರೆ ಅದು ಜ್ಞಾನವನ್ನು ನಾಶಪಡಿಸಲು ಸಾಧ್ಯವಿಲ್ಲ"ಎಂದರು.
ಒಂದು ಕಾಲದಲ್ಲಿ ನಳಂದ ಭಾರತದ ಶೈಕ್ಷಣಿಕ ಅಸ್ಮಿತೆಯ ಕೇಂದ್ರಬಿಂದುವಾಗಿತ್ತು. ಶಿಕ್ಷಣ, ಲಾಭ, ನಷ್ಟ, ಗಡಿಯನ್ನೂ ಮೀರಿದ್ದು. ನೈಜ ಶಿಕ್ಷಣ ನಮ್ಮ ಆಲೋಚನೆ ಮತ್ತು ನಡವಳಿಕೆಗಳನ್ನು ರೂಪಿಸುತ್ತದೆ. ಪ್ರಾಚೀನ ಕಾಲದಲ್ಲಿ, ನಳಂದ ವಿಶ್ವವಿದ್ಯಾಲಯಕ್ಕೆ ಪ್ರವೇಶವು ವಿದ್ಯಾರ್ಥಿಯ ರಾಷ್ಟ್ರೀಯತೆಯನ್ನು ಆಧರಿಸಿರಲಿಲ್ಲ.
ಜೀವನದ ವಿವಿಧ ಸ್ತರಗಳ ಜನರು ಶಿಕ್ಷಣವನ್ನು ಹುಡುಕಿಕೊಂಡು ಇಲ್ಲಿಗೆ ಬರುತ್ತಿದ್ದರು ಎಂದು ತಿಳಿಸಿದರು.
ವಿದೇಶಾಂಗ ಸಚಿವ ಎಸ್.ಜೈಶಂಕರ್, ಬಿಹಾರ ರಾಜ್ಯಪಾಲ ರಾಜೇಂದ್ರ ಅರ್ಲೇಕರ್, ಮುಖ್ಯಮಂತ್ರಿ ನಿತೀಶ್ ಕುಮಾರ್, ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಸಿನ್ಹಾ ಮತ್ತು 17 ದೇಶಗಳ ರಾಯಭಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Poll (Public Option)

Post a comment
Log in to write reviews