ಕರ್ನಾಟಕ
ದರ್ಶನ್ ಅಭಿಮಾನಿಗಳಲ್ಲಿ ದುರ್ವರ್ತನೆ ಕಂಡರೆ ಕಾನೂನು ಕ್ರಮ ತೆಗೆದುಕೊಳ್ಳಲು ಸರ್ಕಾರ ಸೂಚನೆ

ಬೆಂಗಳೂರೂ: ರೇಣುಕ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ನ್ನು ಈಗ ಬಳ್ಳಾರಿ ಜೈಲ್ಗೆ ಶಿಫ್ಟ್ ಮಾಡಲಾಗಿದೆ. ಜೈಲ್ಗೆ ಶಿಫ್ಟ್ ಮಾಡಿ 10 ದಿನಗಳು ಕಳೆದರು ದರ್ಶನ್ ಅಭಿಮಾನಿಗಳ ರಂಪಾಟ ಇನ್ನು ನಿಂತ್ತಿಲ್ಲ.
ಜೈಲಿನ ಮುಖ್ಯ ದ್ವಾರದ ಬಳಿ ಬ್ಯಾರಿಕೇಡ್ ಅಳವಡಿಕೆ ಮಾಡಿದ್ದಾರೆ ಹಾಗು ಜೈಲ್ನ ಮುಖ್ಯ ದ್ವಾರದ ಬಳಿ ಸಿಸಿ ಕ್ಯಾಮರಗಳ ಸಂಖ್ಯೆಯನ್ನು ಹೆಚ್ಚಿಸಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೇ ಮುಖ್ಯ ದ್ವಾಕಕ್ಕೆ ಹೂಂದಿಕೂಂಡಿರುವ ಜೈಲ್ನ ಹಳೆಯ ಗೋಡೆಗಳಿಗೆ ಸಿ ಸಿ ಕ್ಯಾಮರಗಳನ್ನು ಅಳವಡಿಸಲಾಗಿದೆ.
ಇದರಿಂದ ಜೈಲಿಗೆ ಬರುವ ಕುಟುಂಬದವರು ಮತ್ತು ವಾಹನ ಸಂಚಾರದ ಮಾಹಿತಿಗಳ ಮೇಲೆ ಹದ್ದಿನ ಕಣ್ಣು ಇಡಲಾಗಿದೆ.ಹಾಗು ದರ್ಶನ್ ಅಭಿಮಾನಿಗಳಲ್ಲಿ ದುರ್ವರ್ತನೆ ಕಂಡು ಬಂದರೆ ಕಾನೂನು ಕ್ರಮ ತೆಗೆದುಕೊಳ್ಳಲು ಸರ್ಕಾರ ಸೂಚನೆ ನೀಡಿದೆ.
Poll (Public Option)

Post a comment
Log in to write reviews