2024-09-19 05:03:59

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ರೈತರಿಗೆ ಶುಭಸುದ್ದಿ : 22 ಬೆಳೆಗಳಿಗೆ MSP ಹೆಚ್ಚಿಸಿದ ಮೋದಿ ಸರ್ಕಾರ– ಇಲ್ಲಿದೆ ನೋಡಿ ದರ ಪಟ್ಟಿ..

ನವದೆಹಲಿ : ಲೋಕಸಬಾ ಚುನಾವಣೆ ವೇಳೆ ನೀಡಿದ ಭರವಸೆಯಂತೆ ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ ಸರ್ಕಾರ 22 ಬೆಳೆಗಳಿಗೆ MSP ಹೆಚ್ಚಿಸಿದ್ದು, ಈ ಮೂಲಕ ದೇಶದ ರೈತರಿಗೆ ಶುಭಸುದ್ದಿ ನೀಡಿದೆ.   ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಭತ್ತ, ರಾಗಿ, ತೊಗರಿ ಸೇರಿ ಒಟ್ಟು 22 ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆಯನ್ನು ಹೆಚ್ಚಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. 

ಇನ್ನು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 50 ರಷ್ಟು ಎಂಎಸ್‌ಪಿ ದರವನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ.  

ಕೇಂದ್ರ ಸರ್ಕಾರ ಹೆಚ್ಚಿಸಿರುವ ಕನಿಷ್ಠ ಬೆಂಬಲ ಬೆಲೆಯ ವಿವರ ಹೀಗಿದೆ. 

ಭತ್ತದ 143 ರೂಪಾಯಿ 
ರಾಗಿ 268 ರೂಪಾಯಿ
ಗೋಧಿ 150 ರೂಪಾಯಿ
ಮೆಕ್ಕೆ ಜೋಳ 128 ರೂ
ಜೋಳ 210 ರೂ
ಸಜ್ಜೆ 150 ರೂ
ತೊಗರಿ 400 ರೂ
ಹೆಸರುಬೇಳೆ 803 ರೂ
ಉದ್ದಿನ ಬೇಳೆ 350 ರೂ
ಕಡಲೆಕಾಯಿ 527 ರೂ
ಸೂರ್ಯಕಾಂತಿ 360 ರೂ
ಸೋಯಾಬೀನ್ 300 ರೂ.
ಹತ್ತಿ 400 ರೂ
ಎಳ್ಳಿ 632 ರೂ
ಹುಚ್ಚೆಳ್ಳಿ 983 ರೂ

ಇನ್ನು ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ದೇಶದ ಲಕ್ಷಾಂತರ ರೈತರಿಗೆ ಲಾಭವಾಗಲಿದೆ. ಆದರೆ ಸರ್ಕಾರಕ್ಕೆ 35,000 ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಆಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಕೇಂದ್ರದಲ್ಲಿ 3ನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ ತೆಗೆದುಕೊಂಡ ಮೊದಲ ನಿರ್ಧಾರ ಇದಾಗಿದೆ.  ಮುಂಬರುವ ವಿಧಾನಸಭಾ ಚುನಾವಣೆಗಳನ್ನು ಎದುರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಮಾಡಿರುವುದರಿಂದ ಹರಿಯಾಣ, ಮಹಾರಾಷ್ಟ್ರ, ಜಾರ್ಖಂಡ್, ದೆಹಲಿ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ನೆರವಾಗುವ ಸಾಧ್ಯತೆಯಿದೆ. ಒಟ್ಟಾರೆಯಾಗಿ ಕೇಂದ್ರ ಸರ್ಕಾರದ ಈ ನಿರ್ಧಾರ ರೈತರಿಗೆ ಒಂದಷ್ಟು ನೆರವು ಒದಗಿಸಿದೆ.

Post a comment

No Reviews