2024-09-19 04:32:33

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಅನಿಲ ಸೋರಿಕೆ ನಾಲ್ವರ ದುರ್ಮರಣ

ಅನಿಲ ಸೋರಿಕೆಯಿಂದ  ನಾಲ್ವರು ಮೃತ ಪಟ್ಟಿರಿರುವ ಘಟನೆ ಚಿಕ್ಕಮಗಳೂರ ಜಿಲ್ಲೆಯ ಸಕ್ಕರಾಯನ ಪಟ್ಟಣದಲ್ಲಿ  ನಡೆದಿದೆ.
ಕುಮಾರಸ್ವಾಮಿ ಕುಟುಂಬದವರು ಸೋಮವಾರ ಕಡೂರಿನಲ್ಲಿ  ಸಂಬಂಧಿಕರ  ಮದುವೆ ಮುಗಿಸಿ ವಾಪಸ್‌ ಮನೆಗೆ ಬಂದಿದ್ದರು. ರಾತ್ರಿ ಮನೆಗೆ ಬಂದವರು ಎರಡು ಕಿಟಕಿ ಬಂದ್ ಮಾಡಿಕೊಂಡು ಮಲಗಿದ್ದರು. ರೂಮ್‌ನಲ್ಲಿ ಗಂಡ ಹೆಂಡತಿ ಮಲಗಿದ್ದರೆ, ಹಾಲ್ ನಲ್ಲಿ ಮಕ್ಕಳಿಬ್ಬರು ಮಲಗಿದ್ದರು. ಈ ವೇಳೆ ಅನಿಲ ಸೋರಿಕೆಯಾಗಿದೆ. ಈ ಸಂದರ್ಭದಲ್ಲಿ ಒಬ್ಬ ಮಗಳು ಬಾಗಿಲು ತೆಗೆಯುವ  ಪ್ರಯತ್ನ ಮಾಡಿದ್ದರೂ ಅದು ವಿಫಲ ವಾಗಿದೆ. ಎಲ್ಲರ ಕಿವಿ ಮತ್ತು ಮೂಗು ಬಾಯಲ್ಲಿ ರಕ್ತ ಸೋರಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಮೂವತ್ತು ವಷ೯ಗಳಿಂದ ಎರಗನಹಳ್ಳಿ ಗ್ರಾಮದಲ್ಲಿ ಕುಮಾರಸ್ವಾಮಿ ಕುಟುಂಬ ವಾಸವಾಗಿತ್ತು. ಬಟ್ಟೆ ಇಸ್ತ್ರೀ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಕುಮಾರಸ್ವಾಮಿ. ಬಟ್ಟೆ ಇಸ್ತ್ರೀ ಪೆಟ್ಟಿಗೆಗೆ ಗ್ಯಾಸ್ ಬಳಸುತ್ತಿದ್ದರು. ಇದರಿಂದಲೇ ಅನಿಲ ಸೋರಿಕೆಯಾಗಿ ಘಟನೆ‌ ಸಂಭವಿಸಿದೆ ಎನ್ನಲಾಗಿದೆ.

Post a comment

No Reviews