2024-09-19 09:20:54

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ವಿಜಯಪುರ ಜಿಲ್ಲೆಯಲ್ಲಿ ಬ್ರೂಣ ಹತ್ಯೆ ಕೇಸ್-ಖಾಸಗಿ ಆಸ್ಪತ್ರೆಗಳ ಮೇಲೆ DHO ದಾಳಿ !

ವಿಜಯಪುರ: ಚಡಚಣ ಪಟ್ಟಣದ ವಿವಿಧ ಖಾಸಗಿ ಆಸ್ಪತ್ರೆಗಳು ಹಾಗೂ ಕಣ್ಣು ತಪಾಸಣೆ ಮಳಿಗೆಗಳ ಮೇಲೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಬಿ.ಎಸ್‌.ಹುಬ್ಬಳ್ಳಿ ನೇತೃತ್ವದ ತಂಡ ದಿಢೀರ್‌ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.

ಈ ಕುರಿತು ಮಾಧ್ಯಮವರೊಂದಿಗೆ ಪ್ರತಿಕ್ರಿಯಿಸಿದ ಡಾ. ಬಿ.ಎಸ್.ಹುಬ್ಬಳ್ಳಿ, ಇಂಡಿ, ಚಡಚಣ ಹಾಗೂ ಸಿಂದಗಿ ಭಾಗಗಳಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಬ್ರೂಣ ಹತ್ಯೆ ನಡೆಯುತ್ತಿರುವ ವಿಷಯ ಗಮನಕ್ಕೆ ಬಂದಿದ್ದು, ಜಿಲ್ಲೆಯಾದ್ಯಂತ ಪರಿಶೀಲನೆ ನಡೆಸುತ್ತಿದ್ದೇವೆ.
ಇದುವರೆಗೂ ಅಂತಹ ಪ್ರಕರಣಗಳು ಕಂಡು ಬಂದಿಲ್ಲ. ನೇತ್ರ ತಪಾಸಣೆ ಕೇಂದ್ರಗಳಲ್ಲಿ ಅಕ್ರಮ ಯಂತ್ರಗಳು ಕಂಡುಬಂದಿದ್ದು, ಸೂಕ್ತ ಕ್ರಮಕೈಗೊಂಡಿದ್ದೇವೆ. ಅಲ್ಲದೇ ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗುತ್ತಿದೆ ಎಂಬ ಮಾಹಿತಿ ದೊರೆತಿದ್ದು ಆ ಬಗ್ಗೆಯೂ ಹೆಚ್ಚಿನ ನಿಗಾವಹಿಸಿದ್ದೇವೆ ಎಂದು ಮಾಹಿತಿ ನೀಡಿದರು.
 

Post a comment

No Reviews