2024-09-19 04:50:01

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಕುಂದಾಪುರದ ಖ್ಯಾತ ವೈದ್ಯ ಡಾ. ಸತೀಶ್ ಪೂಜಾರಿ ನಿಧನ

ಉಡುಪಿ: ಕುಂದಾಪುರದ ಖ್ಯಾತ ಶ್ರೀ ಮಾತಾ ಆಸ್ಪತ್ರೆಯ ಪಾಲುದಾರ ಹಾಗೂ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಡಾ.ಸತೀಶ್‌ ಪೂಜಾರಿ (54) ಇಂದು ಹೃದಯಘಾತದಿಂದ ವಿಧಿವಶರಾಗಿದ್ದಾರೆ.
ಶ್ರೀ ಮಾತಾ ಆಸ್ಪತ್ರೆಯ ಮಾಲೀಕರಾಗಿದ್ದ ಡಾ. ಸತೀಶ್ ಪೂಜಾರಿ ಇ.ಎನ್.ಟಿ. ತಜ್ಞ ಕೂಡ ಆಗಿದ್ದರು. ಇವರು ವೈದ್ಯರಾಗಿ ಮಾತ್ರವಲ್ಲದೆ ಸಂಗೀತಗಾರನಾಗಿಯೂ ಕರಾವಳಿ ಭಾಗದಲ್ಲಿ ಬಹಳ ಜನಪ್ರಿಯತೆ ಪಡೆದಿದ್ದರು. ಡಾ.ಸತೀಶ ಪೂಜಾರಿ ಅವರು ಇಂದು (ಜುಲೈ 11)ರ ಮುಂಜಾನೆ ಕೋಟ ತಟ್ಟುವಿನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ತಮ್ಮ ವಿಭಿನ್ನ ಶೈಲಿಯ ಹಾಡುಗಾರಿಕೆಯ ಮೂಲಕ ಜಿಲ್ಲೆಯಲ್ಲಿ ಗುರುತಿಸಿಕೊಂಡಿದ್ದ ಡಾ. ಸತೀಶ್ ಪೂಜಾರಿ ಕರಾವಳಿ ಭಾಗದಲ್ಲಿ ಸಾಂಸ್ಕೃತಿಕ ಮತ್ತು ಸಂಗೀತ ಕಾರ್ಯಕ್ರಮಗಳಿಗೆ ಸದಾ ಕಾಲ ಪ್ರೋತ್ಸಾಹ ನೀಡುತ್ತಿದ್ದರು. ಅಲ್ಲದೇ ಬೃಹತ್‌ ಮಟ್ಟದಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಸಹ ಆಯೋಜನೆ ಮಾಡುತ್ತಿದ್ದರು. ಕನ್ನಡ ಚಿತ್ರರಂಗದ ಖ್ಯಾತ ಹಾಡುಗಾರ ರಾಜೇಶ್‌ ಕೃಷ್ಣನ್‌ ಸೇರಿದಂತೆ ವಿವಿಧ ಸಂಗೀತ ದಿಗ್ಗಜರ ಜೊತೆ ಹಾಡಿರುವ ಕೀರ್ತಿ ಇವರದ್ದಾಗಿರುತ್ತದೆ. ಇನ್ನು ಫಿಟ್ನೆಸ್ ಬಗ್ಗೆಯೂ ಡಾ.ಸತೀಶ್ ಪೂಜಾರಿ ಅತಿ ಹೆಚ್ಚು ಒಲವು ಹೊಂದಿದ್ದರು. ಡಾ. ಸತೀಶ್ ಪೂಜಾರಿ ಅವರ ದಿಢೀರ್‌ ಅಗಲಿಕೆ ಅವರ ಕುಟುಂಬಕ್ಕೆ ಮಾತ್ರವಲ್ಲದೆ ಆಪ್ತ ವಲಯಕ್ಕೂ ಕೂಡ ಅರಗಿಸಿಕೊಳ್ಳದಂತಾಗಿದೆ.

Post a comment

No Reviews