2024-09-19 05:02:27

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ದಸರಾ ಸಿದ್ಧತೆ ಸಮಯದಲ್ಲಿ ನಾಡ ಬಾಂಬ್​ ಸೇರಿ ಭಾರಿ ಸ್ಫೋಟಕಗಳು ಪತ್ತೆ

ಮೈಸೂರು :  ಹೋಟೆಲ್‌  ನಲ್ಲಿ ಬಾಂಬ್‌ ಪತ್ತೆ ಯಾಗಿರುವ ಘಟನೆ ಟಿ ನರಸೀಪುರ ತಾಲೂಕಿನ ಕೆಂಪಯ್ಯನಹುಂಡಿ ಗೇಟ್‌ ಬಳಿ ನಡೆದಿದೆ.

ಮೈಸೂರಿನಲ್ಲಿ ದಸರಾ ತಯಾರಿ ನಡೆಯುತ್ತಿರುವಾಗ ಟಿ ನರಸೀಪರ ತಾಲೂಕಿನಲ್ಲಿ ಬಾಂಬ್ ಪತ್ತೆ ಆಗಿದ್ದು ಆತಂಕವನ್ನು ಹೆಚ್ಚಿಸಿದೆ. ನೀಲಿ ಬಣ್ಣದ ಬ್ಯಾಗ್‌ನಲ್ಲಿ ಅಪರಿಚಿತ ವ್ಯಕ್ತಿಗಳು ಬಾಂಬ್‌ಗಳನ್ನು ಇಟ್ಟು ಪರಾರಿಯಾಗಿದ್ದಾರೆ. ಮಾಹಿತಿ  ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ಬಳಿಕ ಅವು ನಾಡ ಬಾಂಬ್ ಎನ್ನುವುದು ಖಚಿತವಾಗಿದೆ. ಸದ್ಯ ಅವುಗಳನ್ನು ವಶಕ್ಕೆ ಪಡೆದ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.

ಬಾಂಬ್‌ನನ್ನು ಗಣಿಗಾರಿಕೆ ಹಾಗೂ ಪ್ರಾಣಿಗಳಿಂದ ಬೆಳೆಯನ್ನು ರಕ್ಷಿಸಲು ಬಳಸುತ್ತಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದವರು ಸ್ಪೋಟಕಗಳನ್ನು ವಶಕ್ಕೆ ಪಡೆದು ಹೋಟೆಲ್ ಸಿಬ್ಬಂದಿಯ ವಿಚಾರಣೆ ನಡೆಸಿದ್ದಾರೆ. ಅಪರಿಚಿತರು ಪ್ಲಾಸ್ಟಿಕ್ ಕವರ್‌ನಲ್ಲಿ ಒಂಬತ್ತು ಸ್ಪೋಟಕಗಳನ್ನು ಇಟ್ಟು ಹೋಗಿದ್ದಾರೆ. ಅನುಮಾನ ಬಂದು ಹೋಟೆಲ್ ಸಿಬ್ಬಂದಿ ಆ ಕವರ್‌ ಅನ್ನು ಹೊರಗಡೆ ತಂದು ಮರಕ್ಕೆ ನೇತು ಹಾಕಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

 

 

Post a comment

No Reviews