
ಬೀದರ್: ಯೋಗ ಶಿಕ್ಷಕ ಹಾಗೂ ಬಿಜೆಪಿ ಮುಖಂಡ ಧೋಂಡಿರಾಮ ಚಾಂದಿವಾಲೆ ಅವರ ಮೃತದೇಹ ಮಹಾರಾಷ್ಟ್ರದ ಉಮರ್ಗಾ ರಾಷ್ಟ್ರೀಯ ಹೆದ್ದಾರಿ ಪಕ್ಕ ಪತ್ತೆಯಾಗಿದೆ.
ಮೃತದೇಹದ ಜೇಬಿನಲ್ಲಿ ದೊರೆತ ಬಸ್ ಟಿಕೆಟ್ ಮತ್ತು ಹಚ್ಚೆ ಆಧಾರದ ಮೇಲೆ ಪೊಲೀಸರು ಸಂಪರ್ಕಿಸಿದಾಗ, ಮೃತ ದೇಹ ಚಾಂದಿವಾಲೆ ಅವರದ್ದೆ ಎಂದು ಕುಟುಂಬಸ್ಥರು ದೃಢಪಡಿಸಿದ್ದಾರೆ.
ಧೋಂಡಿರಾಮ ಚಾಂದಿವಾಲೆ ಹಲವು ವರ್ಷಗಳಿಂದ ಭಾಲ್ಕಿ ತಾಲೂಕಿನ ಲಖನಗಾಂವ್ ನಗರದಲ್ಲಿ ವಾಸವಾಗಿದ್ದರು. 2008ರಿಂದ ನಗರದ ಬರೀದ್ ಶಾಹಿ ಉದ್ಯಾನದಲ್ಲಿ ಉಚಿತ ಯೋಗ ಶಿಬಿರ ನಡೆಸುತ್ತಿದ್ದರು. ಯೋಗ ಗುರು ಬಾಬಾ ರಾಮದೇವ ಅವರ ಆಪ್ತರಾದ ಇವರು ಮರಾಠ ಸಮಾಜ ಮುಖಂಡರೂ ಆಗಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭಾಲ್ಕಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿ ಕೂಡ ಆಗಿದ್ದರು ಎನ್ನಲಾಗಿದೆ.
ಮೃತ ದೇಹ ಜೂನ್ 8 ಸಂಜೆ ಪತ್ತೆಯಾದಾಗ ಮುಖದ ಮೇಲೆ ಗಂಭೀರ ಸ್ವರೂಪದ ಗಾಯಗಾಳಾಗಿದ್ದು ಇದು ಕೊಲೆಯೋ ಅಥವಾ ರಸ್ತೆ ಅಪಘಾತ ಎನ್ನುವುದು ತನಿಖೆಯಿಂದ ತಿಳಿಯಬೇಕಿದೆ. ಘಟನೆಗೆ ಸಂಬಂಧಿಸಿದಂತೆ ಉಮರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Poll (Public Option)

Post a comment
Log in to write reviews