
ಉತ್ತರಾಖಂಡ್ : ಉತ್ತರಾಖಂಡ್ನ ಹವಮಾನ ವೈಫರಿತ್ಯದಿಂದ ಮೃತರಾದ 9 ಜನ ಚಾರಣಿಗರ ದೇಹಗಳು ದೆಹ್ರಾಡೂನ್ ಗೆ ತಲುಪಿವೆ. ಮೃತದೇಹಗಳನ್ನ ಎಂಬಾಮಿಂಗ್ಗಾಗಿ ವಿಮಾನ ನಿಲ್ದಾಣದಿಂದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ನಂತರ ಮೃತದೇಹಗಳನ್ನು ಆಂಬ್ಯುಲೆನ್ಸ್ಗಳ ಮೂಲಕ ದೆಹಲಿ ವಿಮಾನ ನಿಲ್ದಾಣಕ್ಕೆ ಸಾಗಿಸಲಾಗುತ್ತದೆ. ನಾಳೆ ಬೆಳಿಗ್ಗೆ ದೆಹಲಿಯಿಂದ ಬೆಂಗಳೂರಿಗೆ ವಿಮಾನದ ಮೂಲಕ ಮೃತ ದೇಹಗಳನ್ನು ರವಾನಿಸಲು ಈಗಾಗಲೇ ಸ್ಥಳವನ್ನು ಕಾಯ್ದಿರಿಸಿದ್ದೇವೆ. ಇಂದು ಸಂಜೆ ಬದುಕುಳಿದ 13 ಜನ ಚಾರಣಿಗರನ್ನು ಬೆಂಗಳೂರಿಗೆ ಕಳುಹಿಸಿ ಕೊಡಲಾಗುತ್ತಿದ್ದು 5.50 ರ ವಿಮಾನದಲ್ಲಿ ಟಿಕೆಟ್ ಕಾಯ್ದಿರಿಸಲಾಗಿದೆ ಎಂದು ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.
Poll (Public Option)

Post a comment
Log in to write reviews