2024-09-19 04:49:38

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ದರ್ಶನ್ ಬಳ್ಳಾರಿ ಜೈಲಿಗೆ.. ಉಳಿದವರು ಎಲ್ಲಿಗೆ ಗೊತ್ತಾ? ಇಲ್ಲಿದೆ ಪಟ್ಟಿ 

ಬೆಂಗಳೂರು : ನಗರದ ಪರಪ್ಪನ ಅಗ್ರಹಾರದಲ್ಲಿ ದರ್ಶನ್​ಗೆ ರಾಜಾತಿಥ್ಯ ಸಿಗುತ್ತಿರುವ ಫೋಟೋ ವೈರಲ್​ ಆಗ್ತಿದ್ದಂತೆ, ರಾಜ್ಯಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದರಿಂದ ಸರ್ಕಾರಕ್ಕೆ ತೀವ್ರ ಮುಜುಗರ ಉಂಟಾಗಿತ್ತು.

ದರ್ಶನ್​ ರಾಜಾತಿಥ್ಯವನ್ನು ಕಂಡು ಗರಂ ಆದ ಸಿಎಂ ಸಿದ್ದರಾಮಯ್ಯ, ಬೇರೆ ಜೈಲಿಗೆ ಸ್ಥಳಾಂತರ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ಜೈಲು ಅಧಿಕಾರಿಗಳು ಕೋರ್ಟ್​ ಮೊರೆ ಹೋಗಿದ್ದರು. ಸದ್ಯ ಬೆಂಗಳೂರು ನಗರ ಪೊಲೀಸ್ ಆಯುಕ್ತ ಹಾಗೂ ಜೈಲು ಅಧಿಕಾರಿಗಳ‌ ಮನವಿ ಮೇರೆಗೆ 24ನೇ ಎಸಿಎಂಎಂ ಕೋರ್ಟ್ ನಟ ದರ್ಶನ್​ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್​ ಮಾಡಲು ಅನುಮತಿ ನೀಡಿದೆ. ಇಷ್ಟು ದಿನ ಪರಪ್ಪನ ಅಗ್ರಹಾರ ಜೈಲಲ್ಲಿ ಒಟ್ಟಿಗಿದ್ದ ದರ್ಶನ್ ಅಂಡ್​ ಗ್ಯಾಂಗ್ ಈಗ ದಿಕ್ಕಾಪಾಲಾಗುತ್ತಿದ್ದು, ಬೇರೆ ಬೇರೆ ಜೈಲಿಗೆ ಶಿಫ್ಟ್​ ಮಾಡಲು ಕೋರ್ಟ್​ ನಿರ್ದೇಶಿಸಿದೆ.

ಯಾರು ಯಾವ ಜೈಲಿಗೆ ಶಿಫ್ಟ್?

ಎ-1 ಪವಿತ್ರಗೌಡ – ಪರಪ್ಪನ ಅಗ್ರಹಾರ ಜೈಲು
ಎ-2 ದರ್ಶನ್ – ಬಳ್ಳಾರಿ ಜೈಲು
ಎ3 ಪವನ್ – ಮೈಸೂರು ಜೈಲು
ಎ4 ರಾಘವೇಂದ್ರ – ಮೈಸೂರು ಜೈಲು
ಎ5 ನಂದೀಶ್ – ಮೈಸೂರು ಜೈಲು
ಎ6 ಜಗದೀಶ್ – ಶಿವಮೊಗ್ಗ ಜೈಲು
ಎ 7 ಅನುಕುಮಾರ್ – ಪರಪ್ಪನ ಅಗ್ರಹಾರ ಜೈಲು
ಎ9 ಧನರಾಜ್ – ಧಾರವಾಡ ಜೈಲು
ಎ10 ವಿನಯ್ – ವಿಜಯಪುರ ಜೈಲು
ಎ11 ನಾಗರಾಜ್ – ಕಲಬುರಗಿ ಜೈಲು
ಎ12 ಲಕ್ಷ್ಮಣ – ಶಿವಮೊಗ್ಗ ಜೈಲು
ಎ13 ದೀಪಕ್ – ಪರಪ್ಪನ ಅಗ್ರಹಾರ ಜೈಲು
ಎ14 ಪ್ರದೂಶ್ – ಬೆಳಗಾವಿ ಜೈಲು
ಎ-8 ರವಿ ಶಂಕರ್ – ತುಮಕೂರು ಜೈಲು
ಎ15 ಕಾರ್ತಿಕ್ – ತುಮಕೂರು ಜೈಲು
ಎ16 ಕೇಶವಮೂರ್ತಿ – ತುಮಕೂರು ಜೈಲು
ಎ17 ನಿಖಿಲ್ -ತುಮಕೂರು ಜೈಲು

Post a comment

No Reviews