
ಮೈಸೂರು: ಕೊಲೆ ಕೇಸ್ ನಲ್ಲಿ ನಟ ದರ್ಶನ್ ಅರೆಸ್ಟ್ ಆದ ಹಿನ್ನೆಲೆ, ದರ್ಶನ್ ಕುಟುಂಬ ದರ್ಶನ್ನಿಂದ ಅಂತರ ಕಾಯ್ದುಕೊಂಡಿದೆ. ಮೈಸೂರಿನ ಸಿದ್ದಾರ್ಥ ನಗರದಲ್ಲಿ ವಾಸ ಇರುವ ತಾಯಿ ಮೀನಾ ತೂಗುದೀಪ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ದರ್ಶನ್ ತಾಯಿ ಜೊತೆಗೂ ಜಗಳ ಮಾಡಿಕೊಂಡು ಮಾತು ಬಿಟ್ಟಿದ್ದಾರೆ. ಇದರಿಂದ ಮೀನಾ ಅವರು ಎರಡನೇ ಮಗ ದಿನಕರ್ ಜೊತೆ ಮೈಸೂರಿನಲ್ಲಿ ವಾಸವಾಗಿದ್ದಾರೆ ಎಂದು ತಿಳಿದು ಬಂದಿದೆ.
ದರ್ಶನ್ ಅರೆಸ್ಟ್ ಆಗುತ್ತಿದ್ದಂತೆ ಮೈಸೂರಿನಲ್ಲಿರುವ ಅವರ ಕುಟುಂಬಸ್ಥರು ಮನೆಯಿಂದ ಹೊರ ಬಂದಿಲ್ಲ. ಮನೆಯ ಒಳಗಡೆಯೇ ಇದ್ದು ಯಾರನ್ನು ಭೇಟಿ ಮಾಡುತ್ತಿಲ್ಲ ಈ ಪ್ರಕಣದಿಂದ ನೊಂದಿರುವ ಅಜ್ಜಿಯನ್ನು ಸಮಾಧಾನ ಮಾಡಲು ಮೊಮ್ಮಗ ಚಂದನ್ ಅವರು ಮೈಸೂರಿಗೆ ಆಗಮಿಸಿದ್ದಾರೆ. ಅವರ ಜೊತೆ ದರ್ಶನ್ ಅಕ್ಕ ದಿವ್ಯಾ ಕೂಡ ಆಗಮಿಸಿದ್ದಾರೆ.
Poll (Public Option)

Post a comment
Log in to write reviews