2024-09-19 09:11:16

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ದರ್ಶನ್‌ ಅರೆಸ್ಟ್‌ ಹೈಡ್ರಾಮಾದ ಫುಲ್‌ ಡೀಟೈಲ್ಸ್‌

ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ನಟ ದರ್ಶನ್‌ಗೆ ಬಿಗ್‌ ಶಾಕ್‌ ಕಾದಿತ್ತು. ಖಾಕಿ ಪಡೆ ದರ್ಶನ್‌ ಕೈಗೆ ಕೋಳ ಹಾಕಿಯೇ ಬಿಟ್ಟರು.. ಕೊಲೆ ಆರೋಪ ಪ್ರಕರಣದಲ್ಲಿ ಪೊಲೀಸರು ನಟ ದರ್ಶನ್‌ರನ್ನು ಬಂಧಿಸಿದ್ದಾರೆ. ದರ್ಶನ್‌ ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್‌ ಕಳುಹಿಸಿದ್ದ ರೇಣುಕಾಸ್ವಾಮಿಯನ್ನು ಕೊಲೆ ಮಾಡಿರುವ ಹಿನ್ನೆಲೆಯಲ್ಲಿ ನಟ ದರ್ಶನ್‌ರನ್ನು ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಕಾಮಾಕ್ಷಿ ಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ಏನಿದು ಕೇಸ್‌

ದರ್ಶನ್‌ ಗೆಳತಿ ಪವಿತ್ರಾ ಗೌಡಗೆ ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎಂಬಾತ ಅಶ್ಲೀಲವಾಗಿ ಮೆಸೇಜ್‌ ಕಳುಹಿಸಿದ್ದ ಎನ್ನಲಾಗಿದೆ. ಈ ಹಿನ್ನಲೆ ದರ್ಶನ್‌ ಆತನಿಗೆ ವಾರ್ನಿಂಗ್‌ ಸಹ ಕೊಟ್ಟಿದ್ದರು ಆದರೆ ಅದಕ್ಕೂ ತೆಲೆಕೆಡಿಸಿಕೊಳ್ಳದ ಯುವಕ ಮತ್ತೆ ಮತ್ತೆ ಮೆಸೇಜ್‌ ಮಾಡುತ್ತಿದ್ದ. ಇದರಿಂದಾಗಿ ದರ್ಶನ್‌ ಆಪ್ತರು ಒಂದು ಹುಡುಗಿಯ ಹೆಸರಿನಲ್ಲಿ ಫೇಕ್‌ ಅಕೌಂಟ್‌ ಕ್ರಿಯೇಟ್‌ ಮಾಡಿ  ಮನವೊಲಿಸಿ ಆತನನ್ನು ಚಿತ್ರದುರ್ಗದಿಂದ ಬೆಂಗಳೂರಿನ  ಬರುವಂತೆ ಮಾಡಿದ್ದರು. ನಂತರ ಆತನನ್ನು  ದರ್ಶನ್‌ ಆಪ್ತನ ಪಟ್ಟನಗೆರೆ ಜಯಣ್ಣರ ಶೇಡ್‌ ಗೆ ಕರೆದುಕೊಂಡು ಹೋಗಿ  ಚಿತ್ರ ಹಿಂಸೆ ನೀಡಿದ್ರು ಸಿಗರೇಟ್‌ ನಿಂದ ಸುಟ್ಟಿದ್ರು  ನಂತರ ಅತನಿಗೆ ಬಲವಾದ ರಾಡ್‌ ನಿಂದ ತಲೆಗೆ ಹೊಡೆದು ಸಾಯಿಸಿದ್ದಾರೆ ಎಂಬ ಮಾಹಿತಿ ವಿಚಾರಣೆ ವೇಳೆ ತಿಳಿದುಬಂದಿದೆ.

ವಿಚಾರಣೆ ವೇಳೆ ಏನೇನು ನಡೆಯಿತು..?
ಈ ಪ್ರಕರಣ ದಲ್ಲಿ ದರ್ಶನ್‌, ಪವಿತ್ರಾ ಗೌಡ ಸೇರಿದಂತೆ ಒಟ್ಟು 13 ಜನ ಅರೋಪಿಗಳಿರುವುದು ತಿಳಿದುಬಂದಿದೆ. ಹಾಗಾಗಿ ಬೆಳಿಗ್ಗೆಯೇ ಪವಿತ್ರಾ ಗೌಡ ಅವರನ್ನು ಬಂಧಿಸಲಾಗಿತ್ತು. ಈ ವಿಚಾರವಾಗಿ ದರ್ಶನರನ್ನು ಬಂಧಿಸಿದ ಪೊಲೀಸರು ಸರಿಸುಮಾರು 2 ಗಟೆಗಳ ಕಾಲ  ವಿಚಾರಣೆ ನಡೆಸಿದರು. ಈ ವೇಳೆ ದರ್ಶನ್‌ ನಾನು ರೇಣುಕಾ ಸ್ವಾಮಿಗೆ ವಾರ್ನಿಂಗ್‌ ಕೊಡಲು ಮಾತ್ರ ಹೇಳಿದ್ದೆ ಆತನನ್ನು ಕೊಲೆ ಮಾಡಲು ಹೇಳಲಿಲ್ಲ ನನಗೇನು ಗೊತ್ತಿಲ್ಲ ಎಂದಷ್ಟೇ ಉತ್ತರಿಸಿದರು. ಆದರೆ ಅವರೊಂದಿಗೆ ಇದ್ದ ಆರೋಪಿಗಳನ್ನು ವಿಚಾರಣೆ ಮಾಡಿದಾಗ ಅಲ್ಲಿ ನಾವು ಹಲ್ಲೆ ಮಾಡುತ್ತಿದ್ದ ವೇಳೆ ದರ್ಶನ್‌ ಹಾಗೂ ಪವಿತ್ರಾ ಗೌಡ ಇಬ್ಬರೂ ಇದ್ದರೂ ಇಬ್ಬರೂ ಸಹ  ರೇಣುಕಾ ಸ್ವಾಮಿ ಮೇಲೆ ಹಲ್ಲೆಯನ್ನು ನಡೆಸಿದರೂ ಎಂಬ ಮಾಹಿತಿಯನ್ನು ಬಿಚ್ಚಿಟ್ಟಿದ್ದರು. ನಂತರ ವಿಚಾರಣೆಯನ್ನು ತೀವ್ರ ಗೊಳಿಸಿದ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಸಿಸಿ ಟಿವಿ  ಪರಿಶೀಲಿಸಿದಾಗ  ದರ್ಶನ್‌ ಕಾರು ಅಲ್ಲಿಗೆ ಬಂದಿರುವುದು ಪತ್ತೆಯಾಗಿದೆ.  

ದರ್ಶನ್ ವಿಚಾರಣೆ ವೇಳೆ ಅಭಿಮಾನಿಗಳು ಪೊಲೀಸ್‌ ಸ್ಟೇಷನ್‌ ಬಳಿ ಜಮಾಯಿಸಿದ್ದರು.. ದರ್ಶನ ಬಂಧನ ವಿಚಾರ ತಿಳಿಯುತ್ತಿದ್ದಂತೆ ನಿರ್ಮಾಪಕ ರಾಮಮೂರ್ತಿ, ದರ್ಶನ್‌ ಭೇಟಿ ಮಾಡಲು ಸ್ಟೇಷನ್‌ಗೆ ಆಗಮಿಸಿದ್ದರು.. ಆದರೆ ಪೊಲೀಸರು ಇವರಿಗೆ ಅವಕಾಶವನ್ನು ನೀಡಲಿಲ್ಲ. ಬಳಿಕ ದರ್ಶನ್‌ ಸೇರಿದಂತೆ 13 ಮಂದಿಗೆ ಬೌರಿಂಗ್‌ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಬಳಿಕ ದರ್ಶನ್‌ ಸೇರಿದಂತೆ 13 ಮಂದಿ ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಲಾಯ್ತು. ಈ ಪ್ರಕರಣಲ್ಲಿ ಪವಿತ್ರಗೌಡ ಮೊದಲ ಆರೋಪಿಯಾಗಿದ್ದು, ದರ್ಶನ್‌ ಎರಡನೇ ಆರೋಪಿಯಾಗಿದ್ದಾರೆ.

ಮೃತನ ಹಿನ್ನಲೆ 
ಮೃತ ರೇಣುಕಾ ಸ್ವಾಮಿ ಚಿತ್ರದುರ್ಗದಲ್ಲಿ ಮೆಡಿಕಲ್‌ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ. ಈತನಿಗೆ 3 ವರ್ಷದ ಹಿಂದೆ ಮದುವೆಯಾಗಿದ್ದ. ಅಲ್ಲದೇ ಆಕೆ ಈಗ ಗರ್ಭಿಣಿಯಾಗಿದ್ದಾಳೆ. ಅಚ್ಚರಿ ಎಂದರೆ ಈತ ಕೂಡ ದರ್ಶನ್‌ ಅಭಿಮಾನಿಯಾಗಿದ್ದ.
 

Post a comment

No Reviews