2024-09-19 04:37:27

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಅಸಲಿ ಬಂಗಾರದ ಬದಲಾಗಿ ನಕಲಿ ಬಂಗಾರ : ಸಿಕ್ಕಿಬಿದ್ದ ಬ್ಯಾಂಕ್ ಮ್ಯಾನೇಜರ್

ಕೋಝಿಕ್ಕೊಡ್​: ಬ್ಯಾಂಕ್​ ಆಫ್​ ಮಹಾರಾಷ್ಟ್ರದ ವಡಕರ ಬ್ರಾಂಚ್​ನಲ್ಲಿ ಚಿನ್ನ ವಂಚನೆ ಪ್ರಕರಣದ ಪ್ರಮುಖ ಆರೋಪಿಯನ್ನು ಸೆರೆಹಿಡಿಯುವಲ್ಲಿ ತೆಲಂಗಾಣ ಪೊಲೀಸರು ಯಶಸ್ವಿಯಾಗಿದ್ದಾರೆ.

ಜಯಕುಮಾರ್​ ಕಳೆದ ಮೂರು ವರ್ಷಗಳಿಂದ ವಡಕರ ಬ್ರಾಂಚ್​ನ ಮ್ಯಾನೇಜರ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಇತ್ತೀಚೆಗೆ ಅವರು ಎರ್ನಾಕುಲಂನ ಪಲರಿವಟ್ಟಂ ಬ್ರಾಂಚ್​ಗೆ ವರ್ಗಾವಣೆಗೊಂಡಿದ್ದರು. 2024ರ ಜೂನ್​ 13ರಿಂದ ಜುಲೈ 6ರ ವರೆಗೆ ಗ್ರಾಹಕರು ಇರಿಸಲಾಗಿದ್ದ 42 ಖಾತೆಗಳಲ್ಲಿನ ಬಂಗಾರ ಕಣ್ಮರೆಯಾಗಿತ್ತು. ಈ ಪ್ರಕರಣ ಸಂಬಂದ ವಡಕರ ಸರ್ಕಲ್​ ಇನ್ಸ್​ಪೆಕ್ಟರ್​ ಸುನೀಲ್​ ಕುಮಾರ್​ ನೇತೃತ್ವದಲ್ಲಿ ತನಿಖೆ ನಡೆಸಲಾಗಿತ್ತು. ಐಪಿಸಿ ಸೆಕ್ಷನ್​ 409ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾಹಕರು ಇರಿಸಿದ್ದ ಅಸಲಿ ಬಂಗಾರದ ಬದಲಾಗಿ ನಕಲಿ ಬಂಗಾರವನ್ನು ಬ್ಯಾಂಕ್​ನಲ್ಲಿ ಜಮೆಯಾಗಿಸುವ ಮೂಲಕ ಬ್ಯಾಂಕ್​ಗೆ ಜಯಕುಮಾರ್​ ವಂಚಿಸಿದ್ದರು. ತಮಿಳುನಾಡಿನಲ್ಲಿ ಮೆಟ್ಟುಪಾಳ್ಯಮ್​ ಪತ್ತಿ ಸ್ಟ್ರೀಟ್​ನ ನಿವಾಸಿಯಾಗಿರುವ ಜಯಕುಮಾರ್​ ಕೃತ್ಯವು ಬ್ರಾಂಚ್​ನ ಮರು ಮೌಲ್ಯಮಾಪನ ಪ್ರಕ್ರಿಯೆ ವೇಳೆ ಬಹಿರಂಗವಾಗಿತ್ತು. ಇತ್ತೀಚಿಗೆ ಬ್ಯಾಂಕ್​ಗೆ ನೇಮಕಗೊಂಡಿದ್ದ ಹೊಸ ಮ್ಯಾನೇಜರ್​ ವಿ ಇರ್ಷಾದ್​ ಅವರು ಈ ಕೃತ್ಯವನ್ನು ಬಯಲಿಗೆಳೆದು ವಡಕರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಪಿ ನಾಪತ್ತೆಯಾಗಿದ್ದು, ತಲೆಮರೆಸಿಕೊಂಡಿದ್ದ. ಈತನ ಕುರಿತು ಇತರೆ ರಾಜ್ಯಗಳೊಂದಿಗೆ ಕೇರಳ ಪೊಲೀಸರು ಮಾಹಿತಿ ಹಂಚಿಕೊಂಡಿದ್ದು, ಹುಡುಕಾಟಕ್ಕೆ ಕೇರಳ ಪೊಲೀಸರು ನೆರವು ಕೋರಿದ್ದರು. ಬ್ಯಾಂಕ್​ ಹಗರಣದ ಪ್ರಮುಖ ಆರೋಪಿ ತೆಲಂಗಾಣದಲ್ಲಿ ಅವಿತಿರುವುದು ಬೆಳಕಿಗೆ ಬಂದಿತ್ತು.

ಈ ಕುರಿತು ಮಾತನಾಡಿರುವ ತೆಲಂಗಾಣ ಪೊಲೀಸರು, 34 ವರ್ಷದ ಜಯಕುಮಾರ್​ನನ್ನು ಪ್ರಸ್ತುತ ವಶಕ್ಕೆ ಪಡೆಯಲಾಗಿದೆ. ಕೇರಳ ಪೊಲೀಸರ ಸೂಚನೆ ಮೇರೆಗೆ ಈ ಕ್ರಮ ನಡೆಸಲಾಗಿದೆ. ಕೇರಳ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆಯಲು ತೆಲಂಗಾಣಕ್ಕೆ ಆಗಮಿಸಲಿದ್ದಾರೆ ಎಂದರು.

Post a comment

No Reviews