2024-09-19 09:17:00

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಪರಿಷತ್‌ ಚುನಾವಣೆ: ಮೂವರ ಹೆಸರು ಅಂತಿಮಗೊಳಿಸಿದ ಬಿಜಿಪಿ 

ಬೆಂಗಳೂರು;  ವಿಧಾನ ಪರಿಷತ್‌ ಚುನಾವಣೆಗೆ 3 ಅಭ್ಯರ್ಥಿ ಪಟ್ಟಿಯನ್ನು ಹೈಕಮಾಂಡ್‌ ಅಂತಿಮಗೊಳಿಸಿದ್ದು, ಸುಮಲತಾ ಅಂಬರೀಶ್‌, ರವಿಕುಮಾರ್‌  ಮತ್ತು ಎಂ ನಾಗರಾಜು ಹೆಸರು ಅಂತಿಮಗೊಳಿಸಿರುವ ಬಗ್ಗೆ ಬಿಜಿಪಿ ಮೂಲಗಳು ತಿಳಿಸಿವೆ.
ಪಕ್ಷ ನಿಷ್ಠೆ, ಹಿರಿತನ ಪರಿಗಣಿಸಿ ನಾಗರಾಜ್‌  ಅವರನ್ನು ಪರಿಷತ್ ಗೆ ಕಳುಹಿಸಲು ನಿರ್ಧಾರ ಮಾಡಲಾಗಿದೆ ಎನ್ನುವ  ಮಾತು ಪಕ್ಷದಲ್ಲಿ ಕೇಳಿಬರುತ್ತಿದೆ. ಮಂಡ್ಯ ಸಂಸದೆಯಾಗಿದ್ದ ಸುಮಲತಾ ಅವರು ಬಿಜೆಪಿ ಸೇರಿ ಮಂಡ್ಯ ಕ್ಷೇತ್ರ ತ್ಯಾಗ ಮಾಡಿ ಸ್ಪರ್ಧೆಯಿಂದ ಹಿಂದೆ ಸರಿದ ಕಾರಣಕ್ಕೆ ಅವರಿಗೆ ಪರಿಷತ್ ಸ್ಥಾನ ನೀಡಬೇಕು ಎನ್ನುವ ನಿರ್ಧಾರ ಕೈಗೊಳ್ಳಲಾಗಿದೆ‌. ಉತ್ತಮ ವಾಗ್ಮಿ ಹಾಗು ಮಹಿಳಾ ಕೋಟಾ ಎರಡಕ್ಕೂ ಸಮರ್ಥ ನಾಯಕಿ ಆಗಿರುವ ಹಿನ್ನೆಲೆಯಲ್ಲಿ ಅವರ ಹೆಸರನ್ನು ಅಂತಿಮಗೊಳಿಸಿದೆ ಎನ್ನಲಾಗಿದೆ.
ಹಾಲಿ ಪರಿಷತ್‌ ಸದಸ್ಯ  ರವಿಕುಮಾರ್ ರವರ ಪುನರಾಯ್ಕೆಗೆ ಬಿಜಿಪಿ ಹೈಕಮಾಂಡ್ ಸಮ್ಮತಿಸಿದೆ. ಪಕ್ಷಕ್ಕೆ ಸಲ್ಲಿಸುತ್ತಿರುವ ಸೇವೆ, ಪರಿಷತ್ ನಲ್ಲಿ ಬಿಜೆಪಿ ಪರವಾಗಿ ನಿಲ್ಲುವ ಗಟ್ಟಿತನದ ನಿಲುವು  ಅವರ ಮರು ಆಯ್ಕೆಗೆ ಕಾರಣವಾಗಿದೆ. ಕೊನೆ ಕ್ಷಣದ ಬದಲಾವಣೆ ಹೊರತಾಗಿ ಈ ಮೂರು ಹೆಸರುಗಳು  ಅಂತಿಮ ಎಂದು ರಾಜ್ಯ ಬಿಜೆಪಿಯ ಮೂಲಗಳು ತಿಳಿಸಿವೆ.
 

Post a comment

No Reviews