2024-09-19 09:02:59

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಪ್ರಿಯಾಂಕ ಗಾಂಧಿ ಲೋಕಸಭೆಗೆ ಬಂದ್ರೆ ಕಾಂಗ್ರೆಸ್‌ ಮತ್ತಷ್ಟು ಶಕ್ತಿಶಾಲಿ- ಶಶಿ ತರೂರ್

ತಿರುವನಂತಪುರಂ: ಪ್ರಿಯಾಂಕ ಗಾಂಧಿ ಕೇರಳದ ವಯನಾಡ್‌ನಿಂದ ಸ್ಪರ್ಧೆ ಖಚಿತವಾಗುತ್ತಿದ್ದಂತೆ ಕಾಂಗ್ರೆಸ್ ನಾಯಕ, ತಿರುವನಂಪುರಂ ಸಂಸದ ಶಶಿ ತರೂರ್ ಸಂಸತ್ತಿಗೆ ಒಬ್ಬ ಪ್ರಬಲ ವ್ಯಕ್ತಿ ಬಂದಂತಾಗುತ್ತದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಪ್ರಿಯಾಂಕ ಗಾಂಧಿ ಅವರು ವಯನಾಡಿನಿಂದ ಲೋಕಸಭೆಗೆ ಆಯ್ಕೆಯಾದರೆ ವಿರೋಧ ಪಕ್ಷದ ಪರ ಮಾತನಾಡಲು ಸಂಸತ್ತಿನಲ್ಲಿ ಒಬ್ಬ ಪ್ರಬಲ ವ್ಯಕ್ತಿ ಬಂದಂತಾಗುತ್ತದೆ. ಲೋಕಸಭೆ ಚುನಾವಣೆಯಲ್ಲಿ ಪ್ರಿಯಾಂಕ ಗಾಂಧಿ ಅವರು ಅತ್ಯಂತ ಪರಿಣಾಮಕಾರಿ ವಾಗ್ಮಿಯಾಗಿದ್ದರು ಮತ್ತು ಅವರು ಕೇರಳದಿಂದ ಚುನಾವಣಾ ರಾಜಕೀಯ ಪ್ರವೇಶಿಸುತ್ತಿರುವುದು ಅತ್ಯಂತ ಸಂತಸದ ವಿಚಾರವಾಗಿದೆ ಎಂದಿದ್ದಾರೆ.
ರಾಹುಲ್ ಗಾಂಧಿ ಅವರು ರಾಯ್ಬರೇಲಿಯನ್ನು ಉಳಿಸಿಕೊಳ್ಳುವ ಮೂಲಕ ವಯನಾಡನ್ನು ತಮ್ಮ ಸಹೋದರಿಗೆ ಹಸ್ತಾಂತರಿಸುವುದು ಉತ್ತಮ ನಡೆಯಾಗಿದೆ. ನನ್ನ ಪ್ರಕಾರ ಪ್ರಿಯಾಂಕ ಗಾಂಧಿ ಅವರು ವಾರಣಾಸಿಯಿಂದ ಸ್ಪರ್ಧಿಸಿದ್ದರೆ ಇನ್ನೂ ಚುನಾವಣೆ ರೋಚಕವಾಗಿರುತ್ತಿತ್ತು
ಇತ್ತೀಚಿನ ದಿನಗಳಲ್ಲಿ ಪ್ರಿಯಾಂಕ ಗಾಂಧಿ ಮಾತನಾಡುತ್ತಿರುವ ರೀತಿ ಜನರ ಮೇಲೆ ಪರಿಣಾಮ ಬೀರುತ್ತಿದೆ ಇದು ಕಾಂಗ್ರೆಸ್ಗೆ ಹೆಚ್ಚು ಸಹಕಾರಿಯಾಗುತ್ತಿದೆ ಎಂದು ಶಶಿ ತರೂರ್ ಅಭಿಪ್ರಾಯಪಟ್ಟಿದ್ದಾರೆ.
 

Post a comment

No Reviews