
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 18 ರಿಂದ 22 ಸ್ಥಾನ ಗೆಲ್ಲುವ ವಿಶ್ವಾಸವಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಮತದಾನೋತ್ತರ ಸಮೀಕ್ಷೆ ಸಂಬಂಧ ಪ್ರತಿಕ್ರಯಿಸಿದ ಅವರು, ಸಮೀಕ್ಷೆಗಳು ಸುಳ್ಳಾಗಲಿದೆ. ರಾಜ್ಯದಲ್ಲಿ ಪರಿಸ್ಥಿತಿ ಬೇರೆಯೇ ಇದೆ. ನಾವೂ ಆಂತರಿಕ ವರದಿ ತರಿಸಿಕೊಂಡಿದ್ದು ಇದರಲ್ಲಿ 18-20 ಸ್ಥಾನ ಬಂದಿವೆ ಎಂದರು.
ಚುನಾವಣೋತ್ತರ ಸಮೀಕ್ಷೆಗಳು ಎಲ್ಲವೂ ನಿಜ ಆಗುವುದಿಲ್ಲ. ನಾವು ಜನರ ನಡುವೆ ಕೆಲಸ ಮಾಡಿ, ಜನರ ನಾಡಿ ಮಿಡಿತ ಅರಿತುಕೊಂಡಿದ್ದೇವೆ. ಕೆಲ ಸಮೀಕ್ಷೆಗಳಲ್ಲಿ ಬಿಜೆಪಿ ಮುಂದಿದೆ. ಆದರೆ ಎಲ್ಲಾ ಸಮೀಕ್ಷೆಗಳೂ ಸತ್ಯಕ್ಕೆ ಹತ್ತಿರವಾಗಿರಲ್ಲ. ಜೂನ್ 4ರಂದು ಎಲ್ಲವೂ ಗೊತ್ತಾಗಲಿದೆ. ನಮ್ಮ ಗ್ಯಾರಂಟಿ ಯೋಜನೆಗಳು ನಮ್ಮ ಕೈ ಹಿಡಿದಿವೆ ಎಂದರು.
Poll (Public Option)

Post a comment
Log in to write reviews