ಕರ್ನಾಟಕ
ಆಸ್ಪತ್ರೆಗೆ ತೆರಳಿ ಹುಣಸೂರು ಮಂಜುನಾಥ್ರ ತಂದೆಯ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿಗೆ ತೆರಳಿ, ಮಾಜಿ ಶಾಸಕ ಹುಣಸೂರು ಮಂಜುನಾಥ್ ಅವರ ತಂದೆಯನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಇಂದು (ಆಗಸ್ಟ್ 03) ಸಿದ್ದರಾಮಯ್ಯ ಅವರು, ಅನಾರೋಗ್ಯದಿಂದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮ್ಮ ಆತ್ಮೀಯರೂ ಹಾಗೂ ಮಾಜಿ ಶಾಸಕ ಹುಣಸೂರು ಮಂಜುನಾಥ್ ಅವರ ತಂದೆಯವರಾದ ಪ್ರೇಮಕುಮಾರ್ ಅವರನ್ನು ಭೇಟಿಯಾಗಿ ಆರೋಗ್ಯ ಕುರಿತು ವಿಚಾರಿಸಿದರು. ಅಲ್ಲದೆ, ಬಹುಬೇಗ ಗುಣಮುಖರಾಗಿ ಬರುವಂತೆ ಆ ಸಂದರ್ಭದಲ್ಲಿ ಹಾರೈಸಿದರು.
Poll (Public Option)

Post a comment
Log in to write reviews