
ಒಕ್ಕಲಿಗ, ವೀರಶೈವ ಲಿಂಗಾಯತ ಸಮುದಾಯ ವಿರೋಧದ ನಡುವೆಯೂ ಸಿಎಂ ಸಿದ್ದರಾಮಯ್ಯ ಜಾತಿಗಣತಿ ಜಾರಿ ಮಾಡೋದಾಗಿ ಘೋಷಿಸಿದ್ದಾರೆ. ಈ ಕುರಿತು ಸಿ ಎಂ ಸಿದ್ದರಾಮಯ್ಯ ಯಾವುದೇ ಸಮುದಾಯಕ್ಕೆ ಅನ್ಯಾಯವಾಗದ ರೀತಿಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಜಾತಿಗಣತಿ ಜಾರಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಇತ್ತ ಜಾತಿಗಣತಿ ವರದಿ ಜಾರಿಗೆ ಪ್ರಬಲ ಸಮುದಾಯಗಳು ವಿರೋಧ ಮಾಡುತ್ತಿವೆ, ಹಾಗೆಯೇ ಜಾತಿಗಣತಿ ವರದಿ ಜಾರಿಗೆ ಮುಂದಾದ್ರೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ಸಹ ನೀಡಿವೆ. ಆದರೆ ಮತ್ತೊಂದೆಡೆ ಜಾತಿಗಣತಿ ಜಾರಿ ಮಾಡಲೇ ಬೇಕೆಂದು ಅಹಿಂದ ಸಮುದಾಯಗಳು ಒತ್ತಾಯ ಮಾಡುತ್ತಿವೆ. ಇದೀಗ ವಿರೋಧದ ನಡುವೆಯೂ ಜಾತಿಗಣತಿ ಜಾರಿಗೆ ಮುಂದಾಗಿರುವ ರಾಜ್ಯ ಸರ್ಕಾರ. ಜಾತಿಗಣತಿ ಜಾರಿಯಿಂದ ಸಂಕಷ್ಟಕ್ಕೆ ಸಿಲುಕುತ್ತ ಎಂಬ ಪ್ರಶ್ನೆ ಎಲ್ಲೆಡೆ ಮೂಡಿದೆ.
Poll (Public Option)

Post a comment
Log in to write reviews