2024-09-19 04:33:22

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಬಿಜೆಪಿ ಶಾಸಕರು ತಮ್ಮ ಹುಳುಕನ್ನು ಮುಚ್ಚಿಹಾಕಲು ಧರಣಿ ನಡೆಸಿದ್ದಾರೆ: ಡಿಕೆ ಶಿವಕುಮಾರ್

ಬೆಂಗಳೂರು: ಬಿಜೆಪಿ ಮತ್ತು ಜೆಡಿಎಸ್ ಶಾಸಕರು ತಮ್ಮ ಹುಳುಕನ್ನು ಮುಚ್ಚಿಟ್ಟುಕೊಳ್ಳಲು ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.

ವಿಧಾನಸೌಧ ಅವರಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಅವರ ಆಡಳಿತದಲ್ಲಿ ನಡೆದ ಅವ್ಯವಹಾರಗಳನ್ನೆಲ್ಲ ಬಯಲು ಮಾಡುತ್ತೇವೆ, ಮುಡಾ ಸೈಟು ಹಂಚಿಕೆಯ ಬಗ್ಗೆ ಅವರು ಈಗ ಮಾತಾಡುತ್ತಿದ್ದಾರೆ, ಎರಡು ವರ್ಷಗಳ ಹಿಂದೆಯೇ ವಿಷಯ ಪತ್ರಿಕೆಯಲ್ಲಿ ಬಂದಿತ್ತು, ಆಗ್ಯಾಕೆ ಅಧಿಕಾರದಲ್ಲಿದ್ದ ಬಿಜೆಪಿ ನಾಯಕರು ಮಾತಾಡಲಿಲ್ಲ. ಅದು ಹೋಗಲಿ, ಅಧಿವೇಶನ ಶುರುವಾಗಿ ಹತ್ತು ದಿನಗಳ ನಂತರ ಯಾಕೆ ಅವರು ಮುಡಾ ವಿಷಯವನ್ನು ಪ್ರಸ್ತಾಪಿಸುತ್ತಿದ್ದಾರೆ? ಎಂದು ಶಿವಕುಮಾರ್ ಪ್ರಶ್ನಿಸಿದರು. ಅಷ್ಟಕ್ಕೂ ಸಿದ್ದರಾಮಯ್ಯ ಅವರಿಂದ ಅಕ್ರಮ ಎಲ್ಲಿ ನಡೆದಿದೆ? ಅವರು ಖರೀದಿಸಿದ ಜಮೀನನ್ನು ಮುಡಾ ಸ್ವಾಧೀನ ಮಾಡಿಕೊಂಡಿದೆ ಮತ್ತು ಬದಲೀ ಸೈಟುಗಳನ್ನು ಅವರಿಗೆ ನೀಡಿದೆ. ಆಗ ಅಧಿಕಾರದಲ್ಲಿ ಬಿಜೆಪಿ ಸರ್ಕಾರವೇ ಇತ್ತಲ್ಲ ಎಂದು ಶಿವಕುಮಾರ್ ಹೇಳಿದರು.

Post a comment

No Reviews