2024-09-19 05:06:56

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ರತನ್ ಟಾಟಾರಿಗೆ ಅನುವ್ರತ್ ಪ್ರಶಸ್ತಿ ಪ್ರದಾನ

ಬೆಂಗಳೂರು :ಬೆಂಗಳೂರಿನ ಅನುವ್ರತ್ ವಿಶ್ವ ಭಾರತಿ ಸಂಸ್ಥೆಯಿಂದ 2023 ರ ಸಾಲಿನ ಪ್ರತಿಷ್ಠಿತ ಅನುವ್ರತ್ ಪ್ರಶಸ್ತಿಯನ್ನು ಕೈಗಾರಿಕಾ ವಲಯದ ದಂತಕಥೆ, ಸಮಾಜ ಸೇವಕ ರತನ್ ಟಾಟಾ ಅವರಿಗೆ ಮುಂಬೈನ ಅವರ ನಿವಾಸದಲ್ಲಿ ಪ್ರದಾನ ಮಾಡಲಾಯಿತು. ಅನುಕ್ತ ವಿಶ್ವ ಭಾರತಿ ಸೊಸೈಟಿಯ ಅಧ್ಯಕ್ಷ ಅವಿನಾಶ್ ನಹರ್ ಅವರು ಸ್ಮರಣಿಕೆ, ಪ್ರಮಾಣ ಪತ್ರ ಮತ್ತು ೧.೫೧ ಲಕ್ಷ ರೂ ನಗದು ಬಹುಮಾನ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಅನುವಿಭಾದ ಪ್ರಧಾನ ಕಾರ್ಯದರ್ಶಿ ಭಿಖಂ ಸುರಾನಾ, ಮುಂಬೈ ಕಸ್ಟಮ್ ಕಮಿಷನರ್ ಅಶೋಕ್ ಕುಮಾರ್ ಕೊಠಾರಿ, ಅನುವಿಭಾ ಉಪಾಧ್ಯಕ್ಷ ವಿನೋದ್ ಕುಮಾರಿ ಮತ್ತು ಜಂಟಿ ಕಾರ್ಯದರ್ಶಿ ಮನೋಜ್ ಸಿಂಘ್ವಿ ಮತ್ತಿತರರು ಉಪಸ್ಥಿತರಿದ್ದರು.

ಅನುವಿಮಾ ಅಧ್ಯಕ್ಷ ನಹರ್ ಮಾತನಾಡಿ, ಮನುಕುಲಕ್ಕೆ ರತನ್ ಟಾಟಾ ಸಕಾರಾತ್ಮಕ ಕೊಡುಗೆ ನೀಡಿದ್ದಾರೆ. ಜಗತ್ತಿನಲ್ಲಿ ಅವರು ಮಾನವೀಯತೆಯ ಅತ್ಯುತ್ತಮ ಉದಾಹರಣೆಯಾಗಿದ್ದಾರೆ ಎಂದರು.
ಆಚಾರ್ಯ ತುಳಸಿ ಅವರು ಆರಂಭಿಸಿದ ಈ ಆಂದೋಲನವು ವಿಶ್ವಸಂಸ್ಥೆಯಲ್ಲೂ ತನ್ನ ವಿಶೇಷ ಗುರುತನ್ನು ಮೂಡಿಸಿದೆ.

 

Post a comment

No Reviews