
ಚಿಕ್ಕಮಗಳೂರು: ನಗರಸಭೆಯ ಬಿಲ್ ಕಲೆಕ್ಟರ್ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾರೆ. ಚಿಕ್ಕಮಗಳೂರು ನಗರಸಭೆಯ ಬಿಲ್ ಕಲೆಕ್ಟರ್ ಪ್ರದೀಪ್, ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಅಧಿಕಾರಿ.
ಇ-ಸ್ವತ್ತು ಮಾಡಿಕೊಡಲು ರಾಕೇಶ್ ಎಂಬುವವರಿಂದ ಏಳು ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಹೇಳಲಾಗಿದ್ದು, ಅದರಂತೆ 3000 ಮುಂಗಡ ಹಣ ಫೋನ್ ಪೇಯಲ್ಲಿ ಹಾಕಿಸಿಕೊಂಡಿದ್ದ ಪ್ರದೀಪ್, ಇಂದು 2000 ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿ ಅನಿಲ್ ನಾಯಕ್ ಅವರ ಬಲೆಗೆ ಬಿದಿದ್ದಾರೆ.
Poll (Public Option)

Post a comment
Log in to write reviews