2024-09-19 09:08:14

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ವಿಜಯಲಕ್ಷ್ಮಿಜೊತೆ ನಟ ಧನ್ವೀರ್: ದರ್ಶನ್‌ ನೋಡಲು ಬಳ್ಳಾರಿ ಜೈಲಿಗೆ ಭೇಟಿ

ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲು ಸೇರಿರುವ ನಟ ದರ್ಶನ್​​ ಅವರನ್ನು ​​ಭೇಟಿಯಾಗಲು ಪತ್ನಿ ವಿಜಯಲಕ್ಷ್ಮಿ  ಬಂದಿದ್ದರು. ಹಾಗೂ  ಆಪ್ತರಾದ ನಟ ಧನ್ವೀರ್, ಹೇಮಂತ್, ಸುಶಾಂತ್ ನಾಯ್ಡು (ಸಂಬಂಧಿ) ಕೂಡಾ ಕಾಣಿಸಿಕೊಂಡರು. 29 ನಿಮಿಷಗಳ ಕಾಲ ದರ್ಶನ್​​ ಅವರೊಂದಿಗೆ ವಿಸಿಟಿಂಗ್ ಕೊಠಡಿಯಲ್ಲಿ ಇವರು ಚರ್ಚೆ ನಡೆಸಿದರು.

ದರ್ಶನ್ ಪತ್ನಿ ವಿಜಯಲಕ್ಷ್ಮಿ ಎರಡು ಬ್ಯಾಗ್ ಹಿಡಿದು ಜೈಲಿಗೆ ಭೇಟಿ ಕೊಟ್ಟಿದ್ದು. ಒಂದು ಬ್ಯಾಗ್​​ನಲ್ಲಿ ಬಟ್ಟೆಗಳಿದ್ದರೆ, ಮತ್ತೊಂದು ಬ್ಯಾಗ್​​ನಲ್ಲಿ ತಿಂಡಿ ತಿನಿಸುಗಳಿದ್ದವು. ದರ್ಶನ್ ಅವರನ್ನು 4.26ಕ್ಕೆ ಹೈಸೆಕ್ಯೂರಿಟಿ ಸೆಲ್​​ನಿಂದ ವಿಸಿಟಿಂಗ್ ರೂಮ್​​ಗೆ ಕರೆತರಲಾಯಿತು‌.‌‌

ಸೆ.12ಕ್ಕೆ ಭೇಟಿಯಾಗಿದ್ದ ಪತ್ನಿ ವಿಜಯಲಕ್ಷ್ಮಿ, ವಕೀಲ: 4.05ಕ್ಕೆ ಜೈಲೊಳಗೆ ತೆರಳಿ ವಿಸಿಟಿಂಗ್ ರೂಮ್​​ನಲ್ಲಿ ಕಾದು ಕುಳಿತಿದ್ದರು. ನಂತರ, ದರ್ಶನ್​​ ಆಪ್ತರಾದ ನಟ ಧನ್ವೀರ್ ಮತ್ತು ಹೇಮಂತ್​​ ಮಾನಸಿಕ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಬೇಲ್ ವಿಷಯದ ಕುರಿತು ಚರ್ಚಿಸಿದ್ದು, ಈ ವಾರದಲ್ಲೇ ಬೇಲ್ ಅರ್ಜಿ ಸಲ್ಲಿಸುವ ಸಾಧ್ಯತೆಗಳಿವೆ. ಇದಕ್ಕೂ ಮುನ್ನ ಸೆ.12ಕ್ಕೆ ದರ್ಶನ್​ ಅವರನ್ನು ಪತ್ನಿ ವಿಜಯಲಕ್ಷ್ಮಿ ಮತ್ತು ಅವರ ವಕೀಲ ಜೈಲಿಗೆ ಬಂದಿದ್ದರು.

ದರ್ಶನ್‌ ಆಪ್ತರಿಗೆ ಭೇಟಿಗೆ ಅವಕಾಶ ಕೊಡುವಂತೆ ನ್ಯಾಯಾಲಯ ಸೂಚಿಸಿದೆ. ಭೇಟಿಗಾಗಿ, ದರ್ಶನ್ ಪರ ವಕೀಲರು ಬೆಂಗಳೂರು ನ್ಯಾಯಾಲಯದಿಂದ ಅನುಮತಿ‌ ಪಡೆದಿದ್ದಾರೆ. ಈವರೆಗೆ ಕೇವಲ‌ ಸಂಬಂಧಿಗಳಿಗೆ ಮಾತ್ರ ಭೇಟಿಗೆ ಅವಕಾಶ ನೀಡಲಾಗಿತ್ತು. ನ್ಯಾಯಾಲಯದ ಆದೇಶ ಹಿನ್ನೆಲೆ, ಜೈಲು ಅಧಿಕಾರಿಗಳೀಗ ಆಪ್ತರು, ಸ್ನೇಹಿತರಿಗೂ ಭೇಟಿಗೆ ಅವಕಾಶ ಕೊಡುತ್ತಿದೆ.

Post a comment

No Reviews