2024-09-19 05:02:22

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಮಡಿಕೇರಿಯಲ್ಲಿ ಅಂಚೆ ಇಲಾಖೆಯಿಂದ ಅಪಘಾತ ವಿಮೆ ಅಭಿಯಾನ!

ಮಡಿಕೇರಿ : ಅಂಚೆ ಇಲಾಖೆ ಮತ್ತು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ವಿವಿಧ ವಿಮಾ ಕಂಪೆನಿಗಳ ಸಹಯೋಗದೊಂದಿಗೆ ಅಪಘಾತ ವಿಮೆಯನ್ನು ಒದಗಿಸಲು ವಿಶೇಷ ಅಭಿಯಾನ ನಡೆಸಿದೆ. 
18 ರಿಂದ 65 ವರ್ಷ ವಯಸ್ಸಿನ ಒಳಗೆ ಇರುವವರು ವಾರ್ಷಿಕ 549 ರೂ. ಅಥವಾ 749 ರೂ. ಪ್ರೀಮಿಯಂನೊಂದಿಗೆ ಸಮಗ್ರ ಅಪಘಾತ ವಿಮಾ ಯೋಜನೆಯ ಫಲಾನುಭವಿಗಳಾಗಬಹುದು. ಅಪಘಾತದಿಂದ ಆಗುವ ಸಾವುಗಳು ಅಂದರೆ, ರಸ್ತೆ ಅಪಘಾತ, ಹಾವು ಕಡಿತ, ಬೆಂಕಿ, ವಿದ್ಯುತ್‌ ಆಘಾತ, ಸಿಡಿಲು, ನೀರಲ್ಲಿ ಮುಳುಗುವಿಕೆ ಮತ್ತಿತರ ಈ ಯೋಜನೆಯಲ್ಲಿ ಒಳಪಡಿಸಲಾಗಿದೆ. 
ಮೃತರ ಕುಂಬಸ್ಥರು ಕ್ರಮವಾಗಿ 549 ರೂ. ವಿಮಾ ಯೋಜನೆಗೆ 10 ಲಕ್ಷ ರೂ. ಹಾಗೂ 749 ರೂ. ಯೋಜನೆಗಳಿಗೆ 15 ಲಕ್ಷ ರೂ. ವಿಮೆಯನ್ನು ಪಡೆಯುತ್ತಾರೆ.60 ಸಾವಿರ ರೂ.ಒಳರೋಗಿಗಳಿಗೆ ಹಾಗೂ 30 ಸಾವಿರ ರೂ ಹೊರ ರೋಗಿ ವೆಚ್ಚವನ್ನು ಈ ಯೋಜನೆಯು ಒಳಗೊಂಡಿರುತ್ತದೆ. ಹೆಚ್ಚಿನ ಮಾಹಿತಿಗೆ ಸಮೀಪದ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಕೊಡಗು ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.

Post a comment

No Reviews