
ಗಂಗಾವತಿ: ಬೈಕ್ ಮತ್ತು ಕಾರ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ನಲ್ಲಿದ್ದ ತಂದೆ ಮಗ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗಂಗಾವತಿ ತಾಲೂಕಿನ ಕಮಲಾಪುರ ಸಮೀಪ ನಡೆದಿದೆ.
ಆಂಜನೇಯ ಹನುಮಂತಪ್ಪ ಕಟ್ಟಿಮನಿ(52) ಹನುಮೇಶ ಆಂಜನೇಯ ಕಟ್ಟಿಮನಿ(19) ಸಾವನ್ನಪ್ಪಿರುವ ದುರ್ದೈವಿಗಳು. ಮೃತಪಟ್ಟವರನ್ನು ಮೂಲತಃ ಮಲ್ಲಾಪುರ ಗ್ರಾಮದ ನಿವಾಸಿಗಳಾಗಿದ್ದು, ಸದ್ಯ ಗಾದಿನೂರಿನಲ್ಲಿ ವಾಸವಿದ್ದರು.
ಕಮಲಾಪುರದ ಬಳಿಯಿರುವ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಬಿ ಗೇಟ್ ಬಳಿ ಬೈಕ್ನಲ್ಲಿ ಹೊರಟ್ಟಿದ್ದ ವೇಳೆ, ಎದುರಿಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಬೈಕ್ ಸವಾರರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ
Poll (Public Option)

Post a comment
Log in to write reviews