
ಹಾವೇರಿ : ಬೈಕ್ ಸವಾರರ ಮೇಲೆ ಮರ ಬಿದ್ದು, ಇಬ್ಬರು ಸಾವನ್ನಪ್ಪಿರುವ ಘಟನೆ ಹಾವೇರಿಯ ಹಿರೇಕೆರೂರಿನಲ್ಲಿ ನಡೆದಿದೆ.
ಚಿನ್ನಮುಳುಗುಂದ ಗ್ರಾಮದ ನಿವಾಸಿ 35 ವರ್ಷದ ಮಂಜುನಾಥ ಹಾಗೂ ಯತ್ತಿನಹಳ್ಳಿ ಗ್ರಾಮದ ನಿವಾಸಿ 25 ವರ್ಷದ ಹನುಮಂತಪ್ಪ ಮೃತ ದುರ್ದೈವಿಗಳು.
ಮೃತ ಯುವಕರು ಹೆಸ್ಕಾಂ ನೌಕರರಾಗಿದ್ದರು. ಊಟ ಮುಗಿಸಿ ಹೆಸ್ಕಾಂ ಕಚೇರಿಗೆ ತೆರಳುವಾಗ ಬೈಕ್ ಸವಾರರ ಮೇಲೆ ಮರ ಬಿದ್ದು, ಯುವಕರು ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಹಿರೇಕೆರೂರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Poll (Public Option)

Post a comment
Log in to write reviews