2024-09-19 04:34:53

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಬೃಹತ್‌ ಗುಂಡಿಗೆ ಬಿದ್ದ ವಿದ್ಯಾರ್ಥಿ, ಸಾವಿನಿಂದ ಜೆಸ್ಟ್‌ ಮಿಸ್

ಬೆಳಗಾವಿ: ಸರ್ಕಾರಿ ಶಾಲಾ ಆವರಣದಲ್ಲಿದ್ದ ಬೃಹತ್‌ ಗುಂಡಿಯೊಂದಕ್ಕೆ ಬಿದ್ದು ವಿದ್ಯಾರ್ಥಿ ಸಾವಿನ ದವಡೆಯಿಂದ ಪಾರಾದ ಘಟನೆ ಇಂದು ನಡೆದಿದೆ.

ಜಿಲ್ಲೆಯ ಕಾಗವಾಡ ತಾಲೂಕಿನ ಜೂಗುಳ ಗ್ರಾಮದ ಶಾಲಾ ಆವರಣದಲ್ಲಿ ವಿವಿಧ ಕಾಮಗಾರಿಗೆಂದು ಮಣ್ಣು ತೆಗೆದು ಬೃಹತ್ ಗುಂಡಿ ನಿರ್ಮಾಣವಾಗಿತ್ತು. ಮಳೆಗಾಲದಲ್ಲಿ ಆ ಗುಂಡಿಗೆ ನೀರು ತುಂಬಿ ಕೆರೆಯಂತೆ ಮಾರ್ಪಾಡಾಗಿತ್ತು. ಪ್ರಾಥಮಿಕ ಶಿಕ್ಷಣದ ವಿದ್ಯಾರ್ಥಿಯೋರ್ವ ಆಟವಾಡುವ ಭರದಲ್ಲಿ ಆ ಗುಂಡಿಯೊಳಗೆ ಬಿದ್ದು ಮುಳುಗುತ್ತಿದ್ದ ವೇಳೆ ಸ್ಥಳೀಯರ ಸಮಯ ಪ್ರಜ್ಞೆಯಿಂದ ವಿದ್ಯಾರ್ಥಿಯನ್ನು ಹೊರತೆಗಿದ್ದಾರೆ. ಆ ಮೂಲಕ ಸಾವಿನ ಅಂಚಿನಲ್ಲಿದ್ದ ವಿದ್ಯಾರ್ಥಿಯನ್ನು ಪಾರು ಮಾಡಿದ್ದಾರೆ.

ಈ ಬೃಹತ್‌ ಗುಂಡಿ ಮುಚ್ಚಲು ಕಳೆದ 5 ತಿಂಗಳ ಹಿಂದೆಯೇ ಅರ್ಜಿ ಕೊಟ್ಟಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲಾ, ಇದರಿಂದಾಗಿ ಈ ಅನಾಹುತ ಸಂಭವಿಸಿದೆ, ಮುಂದೆ ಯಾವುದೇ ಸಾವು ನೋವು ಆಗುವ ಮೊದಲು ಈ ಗುಂಡಿ ಮುಚ್ಚಿ ಎಂದು ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Post a comment

No Reviews