2024-09-19 04:32:06

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಪೋಷಕರ ವಿರೋದದ ನಡುವೆಯೂ ಅಂಗವಿಕಲ ಯುವತಿಯನ್ನು ಕೈ ಹಿಡಿದ ಪ್ರೇಮಿ

ಚಿಕ್ಕಬಳ್ಳಾಪುರ: ಪೋಷಕರು ಪ್ರೀತಿ  ನಿರಾಕರಿಸಿದ ಕಾರಣ ಅಂಗವಿಕಲ ಯುವತಿಯನ್ನು ಮನೆಯಿಂದ ಕರೆದುಕೊಂಡು ಹೋಗಿ  ಅಂತರ್ಜಾತಿ ವಿವಾಹ ಮಾಡಿಕೊಂಡ ಘಟನೆ ನಗರದ ಮರುಳು ಸಿದ್ದೇಶ್ವರ ದೇವಸ್ಥಾನದಲ್ಲಿ ನಡೆದಿದೆ.

ಪವಿತ್ರ ಕಳೆದ ಆರು ತಿಂಗಳ ಹಿಂದೆ ಅಕ್ಕನ ಮನೆಗೆ ಹೋಗಿದ್ರು ಇದೇ ವೇಳೆ ಗೋಪಿ ಪರಿಚಯವಾಗಿ ಪರಸ್ಪರ  ಇಬ್ಬರು ಪ್ರೀತಿ ಮಾಡಿದ್ದಾರೆ. ಇದೇ ವಿಚಾರ ಪೋಷಕರ ಗಮನಕ್ಕೆ ಬಂದಿದ್ದು ಇಬ್ಬರ ಪ್ರೀತಿಗೆ ಯುವಕನ ಪೋಷಕರು ನಿರಾಕರಿಸಿದ್ದಾರೆ. ತದ ನಂತರ ಇಬ್ಬರು ಮಂಚೇನಹಳ್ಳಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ರಾಜಿ ಪಂಚಾಯತಿ ಮಾಡಿ ಯುವತಿಯ ಇಷ್ಟದಂತೆ ಯುವಕನ ಜೊತೆ ಕಳುಹಿಸಿಕೊಟ್ಟಿದ್ದಾರೆ

ನಂತರ ಸಮತ ಸೈನಿಕ ದಳದ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ಜಿಸಿ ವೆಂಕಟರಮಣಪ್ಪ ಗಮನಕ್ಕೆ ತಂದು ಯುವಕ ಯುವತಿಯ ಒಪ್ಪಿಗೆ ಮೇರೆಗೆ ನಗರದ ಮರಳು ಸಿದ್ದೇಶ್ವರ ದೇವಸ್ಥಾನದಲ್ಲಿ ಯುವತಿಯ ಪೋಷಕರ ನೇತೃತ್ವದಲ್ಲಿ ಇಬ್ಬರ ವಿವಾಹ ನೆರವೇರಿಸಿದ್ದಾರೆ. ಇನ್ನೂ ಇಬ್ಬರ ಇಷ್ಟದಂತೆ ನಾವು ಮದುವೆಯಾಗಿದ್ದೇವೆ ಎಂದು ನೂತನ ವಧುವರರು ತಿಳಿಸಿದ್ದಾರೆ.

15 ದಿನಗಳ ಹಿಂದೆ ಇಬ್ಬರ ಪ್ರೀತಿ ವಿಚಾರ ಗೋತ್ತಾಗಿತ್ತು. ಆದರೆ ಇಬ್ಬರ ಮದುವೆಗೆ ಯುವಕನ ಪೋಷಕರು ಒಪ್ಪಿಗೆ ನಿರಾಕರಿಸುವ ಮಾಹಿತಿ ತಿಳಿದು ಬರುತ್ತಿದಂತೆ ಯುವಕ ಯುವತಿಯನ್ನು ಕರೆದುಕೊಂಡು ಬಂದು ನಮ್ಮ ಗಮನಕ್ಕೆ ತಂದಿದ್ದಾರೆ. ಅದರಂತೆ ಇಂದು ಯುವಕ ಅಂಗವಿಕಲ ಯುವತಿಯನ್ನು ನಮ್ಮ ನೇತೃತ್ವದಲ್ಲಿ ಮದುವೆ ಮಾಡಿಕೊಂಡು ಸಮಾಜಕ್ಕೆ ಮಾದರಿಯಾಗುವುದರ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ ಎಂದು ಸಮತ ಸೈನಿಕ ದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿಸಿ ವೆಂಕಟರಮಣಪ್ಪ ಮಾಹಿತಿ ನೀಡಿ ನೂತನ ವಧುವರರಿಗೆ ಆಶೀರ್ವಾದ  ಮಾಡಿದ್ದಾರೆ.

 

 

Post a comment

No Reviews