2024-09-19 04:39:14

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಹಾಲಿನ ಟ್ಯಾಂಕರ್ ಗೆ ಲಾರಿ ಡಿಕ್ಕಿ: ಓರ್ವ ಸಾವು, ಹಾಲಿಗಾಗಿ ಮುಗಿಬಿದ್ದ ಜನ!

ನವದೆಹಲಿ: ವೇಗವಾಗಿ ಬಂದ  ಟ್ರಕ್  ಹಾಲಿನ ಟ್ಯಾಂಕರ್ ಗೆ ಡಿಕ್ಕಿ ಹೊಡೆದ ಪರಿಣಾಮ ಟ್ರಕ್‌ ಚಾಲಕ ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ದೆಹಲಿ-ಮೀರತ್ ಎಕ್ಸ್ಪ್ರೆಸ್ ವೇ ನಲ್ಲಿ ನಡೆದಿದೆ.

 ಮೃತ  ವ್ಯಕ್ತಿ ಜಾರ್ಖಂಡ್ ಮೂಲದ 45 ವರ್ಷದ ಪ್ರೇಮ್ ಸಾಗರ್  ಎಂದು ತಿಳಿದು ಬಂದಿದೆ.

ದೆಹಲಿ-ಮೀರತ್ ಎಕ್ಸ್ ಪ್ರೆಸ್ ವೇಯ ಎಬಿಇಎಸ್ ಕಾಲೇಜು ಬಳಿ ಈ ಅಪಘಾತ ಸಂಭವಿಸಿದ್ದು, ಮೀರತ್ ಕಡೆಗೆ ಹೋಗುತ್ತಿದ್ದ ಟ್ಯಾಂಕರ್ ಗೆ ಹಿಂದಿನಿಂದ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ಟ್ಯಾಂಕರ್ನಿಂದ ಹಾಲು ಚೆಲ್ಲಲಾರಂಭಿಸಿತ್ತು. ಹಾಲಿಗಾಗಿ ಸುತ್ತಮುತ್ತಲಿನ ಜನರು ಹಾಲಿಗಾಗಿ ಮುಗಿಬಿದ್ದಿರು ಈ  ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಸ್ಥಳೀಯರು ಕೂಡಲೇ ಹಾಲಿನ ಟ್ಯಾಂಕರ್ ಗೆ ಪಾತ್ರೆಗಳು, ಬಾಟಲಿಗಳೊಂದಿಗೆ ಬಂದು ಸುತ್ತುವರೆದು ಟ್ಯಾಂಕರ್ ನಿಂದ ಹೊರಬರುವ ಹಾಲನ್ನು ತೆಗೆದುಕೊಂಡು ಹೋಗಿದ್ದಾರೆ.

Post a comment

No Reviews