2024-09-19 09:10:59

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಅಕ್ಷಯ ತೃತೀಯದ ಮಹತ್ವ ತಿಳಿಯಲು ಈ ಸ್ಟೋರಿ ನೋಡಿ.

ಈ ವರ್ಷ ಅಕ್ಷಯ ತೃತೀಯ ಮೇ 10ರಂದು ಬರುತ್ತದೆ. ಅಂದರೆ ಚಿತ್ರೈ ಮಾಸದ ಶುಕ್ಲ ಪಕ್ಷದ 14 ನೇ ದಿನದಂದು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ. ಅಕ್ಷಯ ಎಂದರೆ ಕಡಿಮೆಯಾಗದ ಎಂದರ್ಥ. ಅದಕ್ಕಾಗಿಯೇ ಅಕ್ಷಯ ತೃತೀಯ ದಿನದಂದು ಚಿನ್ನವನ್ನು ಖರೀದಿಸುವುದು ಉತ್ತಮ. ಈ ದಿನ ಚಿನ್ನ ಖರೀದಿಸಿದರೆ ಚಿನ್ನ ಹೆಚ್ಚುತ್ತಲೇ ಹೋಗುತ್ತದೆ ಎಂಬ ಕಾರಣಕ್ಕೆ ಅನೇಕರು ಈ ದಿನ ಚಿನ್ನ, ಬೆಳ್ಳಿಯಂತಹ ದುಬಾರಿ ಆಭರಣಗಳನ್ನು ಖರೀದಿಸುವುದು ವಾಡಿಕೆ .

 ಅಕ್ಷಯ ತೃತಿಯ ದಿನದಂದು ಚಿನ್ನ ಖರೀದಿ ಏಕೆ ಶುಭಕರ

ಹಿಂದೂಗಳ ಅತ್ಯಂತ ಮಂಗಳಕರ ದಿನವೆಂದರೆ ಅಕ್ಷಯ ತೃತೀಯ. ಅಕ್ಷಯ ತೃತಿಯಂದು ಮಹಾಲಕ್ಷ್ಮಿಯನ್ನು ಪೂಜಿಸುವುದರಿಂದ ಜೀವನದಲ್ಲಿ ಸುಖ, ಶಾಂತಿ ಮತ್ತು ಸಂಪತ್ತು ದೊರೆಯುತ್ತದೆ. ಸಂಪತ್ತಿನ ಅಧಿಪತಿಯಾದ ಮಹಾಲಕ್ಷ್ಮಿಗೆ ಈ ದಿನದಂದು ಇಷ್ಟವಾದ ವಸ್ತುಗಳನ್ನು ಖರೀದಿಸುವುದು ತುಂಬಾ ಮಂಗಳಕರವಾಗಿದೆ.ಇದನ್ನು ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಆಚರಿಸಲಾಗುತ್ತದೆ..

 ಚಿನ್ನ ಖರೀದಿ ಬಲು ಜೋರು ಏಕೆ

ಈ ದಿವಸಗಳಂದು ಸಾಮಾನ್ಯವಾಗಿ ಎಲ್ಲಾ ಶುಭ ಕೆಲಸವನ್ನು ಮಾಡಿದರೆ ತುಂಬಾ ಒಳ್ಳೆದು. ಅಕ್ಷಯ ತೃತೀಯ ದಿವಸ ಜೀವನದ ಹೊಸ ಕೆಲಸ, ಉದ್ಯೋಗ ಪ್ರಾರಂಭ, ಚಿನ್ನಾಭರಣ ಖರೀದಿ ತುಂಬಾ ಶುಭಕರ.

ಇತ್ತಿಚಿನ ಚಿನ್ನ ಬಾರಿ ದುಬಾರಿಯಾಗಿದ್ದರು ಇಂದಿನ ದಿನ ಮಹಿಳೆಯರು ಈ ದಿನಕ್ಕಾಗಿ ಚಿನ್ನಾಭರಣ ಖರೀದಿಸುತ್ತಾರೆ. ಈ ಅಕ್ಷಯ ತೃತೀಯ ಹಾಸು ಪಾಸು ದಿನಗಳಲ್ಲಿ ಮದುವೆ ಹಾಗು ಇನ್ನಿತರ ಶುಭ ಕಾಯ೯ಗಳು ಹೆಚ್ಚು ಜರುಗುವುದರಿಂದ ಎಲ್ಲ ಚಿನ್ನಾಭರಣ ಮಳಿಗೆಗಳಲ್ಲಿ ಜನರು ಮುಗಿ ಬಿದ್ದು ಚಿನ್ನ ಖರೀದಿ ಮಾಡುತ್ತಾರೆ.

 

Post a comment

No Reviews